MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthdhaare Serial: ಜಯದೇವ್‌-ಶಕುಂತಲಾಗೆ ಗುಂಡಿ ತೋಡಲು ರೆಡಿಯಾದ ಮಾವ; ಜೊತೆಗಿದ್ಕೊಂಡೇ ಹಳ್ಳ ತೋಡ್ತಾರೆ!

Amruthdhaare Serial: ಜಯದೇವ್‌-ಶಕುಂತಲಾಗೆ ಗುಂಡಿ ತೋಡಲು ರೆಡಿಯಾದ ಮಾವ; ಜೊತೆಗಿದ್ಕೊಂಡೇ ಹಳ್ಳ ತೋಡ್ತಾರೆ!

Amruthadhaare Tv Serial: ಲಕ್ಷ್ಮೀಕಾಂತ್‌ ಮಾವ ಇಷ್ಟುದಿನಗಳಿಂದ ಮದುವೆಯಾಗದೆ, ಮಕ್ಕಳನ್ನು ಮಾಡಿಕೊಳ್ಳದೆ ಸಂಸಾರದ ಬಗ್ಗೆ ಯೋಚನೆ ಮಾಡದೆ, ಶಾಕುಂತಲಾ ಹಾಗೂ ಜಯದೇವ್‌ ಜೊತೆ ಇದ್ದನು. ಇವರ ಜೊತೆ ಸೇರಿಕೊಂಡು ಅವನು ಮಾಡಿದ ಕೆಟ್ಟ ಕೆಲಸ ಒಂದಲ್ಲ, ಎರಡಲ್ಲ. ಈಗ ಅವನಿಗೆ ಬುದ್ಧಿ ಬಂದಿದೆ. 

2 Min read
Padmashree Bhat
Published : Oct 22 2025, 12:32 PM IST
Share this Photo Gallery
  • FB
  • TW
  • Linkdin
  • Whatsapp
18
ಲಕ್ಷ್ಮೀಕಾಂತ್‌ನನ್ನು ಜೈಲಿಗೆ ಕಳಿಸಿದ್ರು
Image Credit : zee5

ಲಕ್ಷ್ಮೀಕಾಂತ್‌ನನ್ನು ಜೈಲಿಗೆ ಕಳಿಸಿದ್ರು

ಈ ಹಿಂದೆ ಶಕುಂತಲಾ ತಾನು ಮಾಡಿದ ತಪ್ಪಿಗೆ ತನ್ನ ಅಣ್ಣನನ್ನು ಜೈಲಿಗೆ ಕಳಿಸಿದ್ದಳು. ಆದರೆ ಒಮ್ಮೆಯೂ ಅಣ್ಣನನ್ನು ನೋಡಲು ಬರಲಿಲ್ಲ. ಗೌತಮ್‌ನಿಂದ ಅಷ್ಟು ಆಸ್ತಿ ಅನುಭವಿಸುವ ಯೋಗ ಬಂದರೂ ಕೂಡ ಶಕುಂತಲಾ, ಜಯದೇವ್‌ ಪಾತ್ರ ಲಕ್ಷ್ಮೀಕಾಂತ್‌ ಕಡೆಗೆ ಮುಖ ಮಾಡಿರಲಿಲ್ಲ, ಯೋಚನೆಯೂ ಮಾಡಿರಲಿಲ್ಲ.

28
ಲಕ್ಷ್ಮೀಕಾಂತ್‌ನನ್ನು ಜೈಲಿನಿಂದ ಬಿಡಿಸಲೇ ಇಲ್ಲ
Image Credit : zee5

ಲಕ್ಷ್ಮೀಕಾಂತ್‌ನನ್ನು ಜೈಲಿನಿಂದ ಬಿಡಿಸಲೇ ಇಲ್ಲ

ಈ ಹಿಂದೆ ಶಕುಂತಲಾ ತಾನು ಮಾಡಿದ ತಪ್ಪಿಗೆ ತನ್ನ ಅಣ್ಣನನ್ನು ಜೈಲಿಗೆ ಕಳಿಸಿದ್ದಳು. ಆದರೆ ಒಮ್ಮೆಯೂ ಅಣ್ಣನನ್ನು ನೋಡಲು ಬರಲಿಲ್ಲ. ಗೌತಮ್‌ನಿಂದ ಅಷ್ಟು ಆಸ್ತಿ ಅನುಭವಿಸುವ ಯೋಗ ಬಂದರೂ ಕೂಡ ಶಕುಂತಲಾ, ಜಯದೇವ್‌ ಪಾತ್ರ ಲಕ್ಷ್ಮೀಕಾಂತ್‌ ಕಡೆಗೆ ಮುಖ ಮಾಡಿರಲಿಲ್ಲ, ಯೋಚನೆಯೂ ಮಾಡಿರಲಿಲ್ಲ.

Related Articles

Related image1
ಮಿತಿ ಮೀರಿ ಮಾತನಾಡಿದ ಕಿಡಿಗೇಡಿಗಳು; ಫಸ್ಟ್‌ ಟೈಮ್‌ ಸಿಡಿದೆದ್ದ Amruthadhaare Serial ನಟಿ ಛಾಯಾ ಸಿಂಗ್!
Related image2
Amruthadhaare Serial: ಆ ಪುಟಾಣಿ ಮಾತಿಗೆ ಬೆಚ್ಚಿಬಿದ್ದ ಗೌತಮ್; ಅದೃಷ್ಟದೇವತೆ ಪವಾಡದಿಂದ ದಿಗ್ಭ್ರಮೆ
38
ಲಕ್ಷ್ಮೀಕಾಂತ್‌ ಮಾವನನ್ನು ಬಿಡಿಸಿದ ಗೌತಮ್
Image Credit : zee5

ಲಕ್ಷ್ಮೀಕಾಂತ್‌ ಮಾವನನ್ನು ಬಿಡಿಸಿದ ಗೌತಮ್

ಆದರೆ ಗೌತಮ್‌ ಮಾತ್ರ ಲಕ್ಷ್ಮೀಕಾಂತ್‌ ಮಾವನನ್ನು ಬಿಡಿಸಲು ತುಂಬ ಕಷ್ಟಪಟ್ಟಿದ್ದು, 50000 ರೂಪಾಯಿ ದುಡ್ಡು ಕೊಟ್ಟಿದ್ದನು. “ಗೌತಮ್‌ ತುಂಬ ಕಷ್ಟಪಟ್ಟು 50000 ರೂಪಾಯಿ ಕೊಟ್ಟು, ನಿಮ್ನನ್ನು ಬಿಡಿಸಿದ್ದಾನೆ. ನೀವು ಅವನಿಗೆ ಋಣಿ ಆಗಿರಬೇಕು” ಎಂದು ಆನಂದ್‌, ಲಕ್ಷ್ಮೀಕಾಂತ್‌ನಿಗೆ ಹೇಳಿದ್ದನು. ಆದರೆ ಲಕ್ಷ್ಮೀಕಾಂತ್‌ ಆರಂಭದಲ್ಲಿ ಅವನ ಮಾತನ್ನು ನಂಬಿರಲಿಲ್ಲ.

48
ಲಕ್ಷ್ಮೀಕಾಂತ್‌ಗೆ ಜ್ಞಾನೋದಯ
Image Credit : zee5

ಲಕ್ಷ್ಮೀಕಾಂತ್‌ಗೆ ಜ್ಞಾನೋದಯ

ಈಗ ಮನೆಗೆ ಬಂದಮೇಲೆ ಶಕುಂತಲಾ, ಜಯದೇವ್‌ ಸುಖದ ಸುಪ್ಪತ್ತಿಗೆಯಲ್ಲಿ ಜೀವನ ಮಾಡುತ್ತಿರೋದು, ನನ್ನನ್ನು ಕೆಲಸದವರ ಥರ ನೋಡುತ್ತಿರೋದು ನೋಡಿ ಲಕ್ಷ್ಮೀಕಾಂತ್‌ಗೆ ತನ್ನ ತಪ್ಪಿನ ಅರಿವಾಗಿದೆ. ತನ್ನ ತಪ್ಪಿಗೆ ಪ್ರಾಯಶ್ಚಿತ ಆಗಿದೆ. ಇವರಿಗೆ ಸಮಾಧಿ ಕಟ್ಟಲು ಲಕ್ಷ್ಮೀಕಾಂತ್‌ ರೆಡಿ ಆಗಿದ್ದಾನೆ.

58
ತಂಗಿಗೋಸ್ಕರ ಮಾಡಬಾರದ ತಪ್ಪು ಮಾಡಿದೆ
Image Credit : zee5

ತಂಗಿಗೋಸ್ಕರ ಮಾಡಬಾರದ ತಪ್ಪು ಮಾಡಿದೆ

“ಬದುಕು ಒಂದು ನಾಟಕ ರಂಗ, ಆದರೆ ಮೇಕಪ್‌ ಎಷ್ಟಿರಬೇಕು ಅಂತ ಗೊತ್ತಿರಬೇಕು. ಮೇಕಪ್‌ ಸಹಜವಾಗಿರಬೇಕು, ಸರಳವಾಗಿರಬೇಕು, ನೋಡಿದೋರು ಓಡಿ ಹೋದರೂ ಪರವಾಗಿಲ್ಲ. ಸ್ವಾಭಿಮಾನ ಬಿಟ್ಟುಕೊಡಬಾರದು, ವ್ಯಕ್ತಿತ್ವ ಬಿಡಬಾರದು. ಈ ಇಳಿ ವಯಸ್ಸಿನಲ್ಲಿ ನನಗೆ ಈ ಸತ್ಯ ಗೊತ್ತಾಯ್ತು. ಕೇವಲ ಮನರಂಜನೆ ಇದ್ದರೆ ಏನೂ ನಡೆಯೋದಿಲ್ಲ, ಬದುಕಿನಲ್ಲಿ ಸ್ವಲ್ಪ ಬೋಧನೆಯೂ ಇರಬೇಕು. ನಾನು ತಂಗಿ, ಮಕ್ಕಳು ಎಂದು ಮಾಡಬಾರದ ತಪ್ಪು ಮಾಡಿದೆ” ಎಂದು ಲಕ್ಷ್ಮೀಕಾಂತ್‌ ಒಬ್ಬನೇ ಮಾತನಾಡಿಕೊಂಡಿದ್ದಾನೆ.

68
ನನ್ನದು ಒಂದು ಬಾಳಾ?
Image Credit : zee5

ನನ್ನದು ಒಂದು ಬಾಳಾ?

“ವಿದುರನಾಗಬೇಕಿದ್ದವನು ಶಕುನಿಯಾದ. ನನಗೆ ಏನು ಕಮ್ಮಿ ಇತ್ತು? ಮಾತು, ವಿಚಾರ, ಬುದ್ಧಿಶಕ್ತಿ, ವಿವೇಕ ಎಲ್ಲ ಇತ್ತು. ಆದರೂ ಹಣೆಬರಹ, ಬೇಕಾಗಿದ್ದ ಕಡೆ ಬಳಕೆ ಆಗದೆ, ಬೇಡವಾಗದ ಕಡೆ ಬಳಕೆ ಆಯ್ತು. ನನ್ನ ಹಾಗೆ ಮನೆ ಹಾಳು ಮಾಡುವವರಿಗೆ ಒಳ್ಳೆಯ ಉದಾಹರಣೆ ಆಗಬೇಕು. ನನ್ನ ಥರ ಮಾಡಿದ್ರೆ ಕ್ರಿಮಿ ಆಗ್ತೀರಾ, ಅಂಥ ಬಾಳು ಬೇಕಾ? ಇದು ಒಂದು ಬಾಳಾ?” ಎಂದು ಮಾವ ತನ್ನನ್ನು ತಾನೇ ವಿಮರ್ಶೆ ಮಾಡಿಕೊಂಡಿದ್ದಾನೆ.

78
ಅಷ್ಟು ದುಡ್ಡಿದ್ರೂ 50000 ರೂ ಕೊಡೋಕೆ ಆಗಿಲ್ವಾ?
Image Credit : zee5

ಅಷ್ಟು ದುಡ್ಡಿದ್ರೂ 50000 ರೂ ಕೊಡೋಕೆ ಆಗಿಲ್ವಾ?

ʼಒಂಟಿ ಪಿಶಾಚಿ ಥರ ಇಡೀ ಜೀವಮಾನ ತಂಗಿ, ತಂಗಿ ಮಕ್ಕಳಿಗೆ ಸವೆಸಿದೆ, ಎಲ್ಲವನ್ನು ಕಳೆದುಕೊಂಡೆ, ಆಯುಷ್ಯ ಸವೆಸಿದೆ, ಕತ್ತಲೆ ಕೋಣೆಯಲ್ಲಿ ಕಳೆಯುವ ಹಾಗೆ ಮಾಡಿದ್ರು, ಮುದ್ದೆ ಮುರಿಯೋ ಹಾಗೆ ಮಾಡಿದ್ರು, ಇಷ್ಟೆಲ್ಲ ದುಡ್ಡಿದ್ದರೂ ಕೂಡ 50000 ರೂಪಾಯಿ ಕೊಡೋಕೆ ಆಗಲಿಲ್ಲವಾ? ನಿಮ್ಮ ಜೊತೆ ಇದ್ದಿದ್ದಕ್ಕೆ ಇದು ನನಗೆ ಸಿಕ್ಕ ಬಹುಮಾನ” ಎಂದು ಲಕ್ಷ್ಮೀಕಾಂತ್‌ ಹೇಳಿಕೊಂಡಿದ್ದಾನೆ.

88
ಶಕುಂತಲಾ, ಜಯದೇವ್‌ ಭಿಕ್ಷೆ ಬೇಡಬೇಕು
Image Credit : Instagram

ಶಕುಂತಲಾ, ಜಯದೇವ್‌ ಭಿಕ್ಷೆ ಬೇಡಬೇಕು

“ಅವರಿಂದ ಇಷ್ಟು ದೊಡ್ಡ ಬಹುಮಾನ ಪಡೆದಮೇಲೆ ನೀನು ಕೊಡಬೇಕು ಅಲ್ವಾ ಅವರಿಗೆ. ಕೌರವನ ಜೊತೆ ಶಕುನಿ ಇದ್ದ ಅಲ್ವಾ? ಕೌರವನ ಜೊತೆ ಇದ್ದುಕೊಂಡು ಶಕುನಿ ಹಳ್ಳತೋಡಿದ ಹಾಗೆ ನಿಮ್ಮ ಜೊತೆ ಇದ್ದುಕೊಂಡು ನಿಮ್ಮನ್ನು ಕೂಡ ಹಳ್ಳ ತೋಡಿ ಮಣ್ಣು ಮುಚ್ಚುವೆ. ರೋಡ್‌ ರೋಡ್‌ನಲ್ಲಿ ಭಿಕ್ಷೆ ಬೇಡುವ ಹಾಗೆ ಮಾಡ್ತೀನಿ” ಎಂದು ಲಕ್ಷ್ಮೀಕಾಂತ್‌ ಹೇಳಿದ್ದಾರೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved