Viral News : ಎರಡು ದಿನದ ಡೆಡ್ ಲೈನ್ ನೀಡಿದ್ದ ದೆವ್ವ! ಮಹಿಳೆ ಜೀವನವೇ ಕೊನೆಯಾಯ್ತು!

By Suvarna NewsFirst Published Jul 28, 2023, 2:44 PM IST
Highlights

ದೆವ್ವವಿಲ್ಲ.. ಪಿಶಾಚಿಯಿಲ್ಲ ಅಂತಾ ನೀವು ಹಾಡ್ಬಹುದು. ಆದ್ರೆ ಕೆಲವರು ದೆವ್ವವಿದೆ.. ಪಿಶಾಚಿಯಿದೆ ಎನ್ನುತ್ತಾರೆ. ಅದಕ್ಕೆ ಪೂಜೆ, ಬಲಿ ಅಂತಾ ಟೈಂ ಹಾಳುಮಾಡಿಕೊಳ್ಳೋರು ಒಂದ್ಕಡೆಯಾದ್ರೆ ಮತ್ತೊಂದು ಗುಂಪು ಜೀವಕ್ಕೆ ಕುತ್ತು ತಂದುಕೊಳ್ಳುತ್ತೆ.
 

ದೆವ್ವ ನನ್ನ ಹಿಂದೆ ಬಿದ್ದಿದೆ… ನಾಡಿದ್ದು ಲಾಸ್ಟ್ ಡೇಟ್ ನನಗೆ  ಅಂತಾ ಯಾರಾದ್ರೂ ಹೇಳಿದ್ರೆ ಬಿದ್ದು ಬಿದ್ದು ನೀವು ನಗ್ಬಹುದು. ಎಲ್ಲಿ ತೋರಿಸು ನಾನೂ ದೆವ್ವ ನೋಡ್ತೇನೆ ಅಂತಾ ಮಕ್ಕಳು ಕೂಡ ಮುಂದೆ ಬರಬಹುದು. ಈಗೇನಿದ್ರೂ ದೆವ್ವದ ಸಿನಿಮಾ ನೋಡಿ ಮಾತ್ರ ಜನರು ಎಂಜಾಯ್ ಮಾಡ್ತಾರೆಯೇ ವಿನಃ ನಿಜವಾದ ದೆವ್ವ ಎದುರಿಗೆ ಬಂದ್ರೂ ಬಹುತೇಕ ಜನ ನಂಬೋದಿಲ್ಲ. ಡಿಜಿಟಲ್ ಯುಗದಲ್ಲಿಯೂ ದೆವ್ವ, ಭೂತ ಇದ್ಯಾ ಎಂದು ಕೆಲವರು ಪ್ರಶ್ನೆ ಮಾಡ್ತಾರೆ. ಆದ್ರೆ ಈ ಕಾಲದಲ್ಲೂ ಅದನ್ನು ನಂಬುವ ಜನರು ನಮ್ಮಲ್ಲಿ ಸಾಕಷ್ಟಿದ್ದಾರೆ. ಬರೀ ನಂಬಿದ್ರೆ ಯಾವುದೇ ನಷ್ಟವಿಲ್ಲ. ಆದ್ರೆ ದೆವ್ವದ ಹೆಸರಿನಲ್ಲಿ ಪ್ರಾಣ ಕಳೆದುಕೊಳ್ಳೋದು ಅಂದ್ರೆ? ಇದನ್ನು ಏನ್ನೆನ್ನಬೇಕೋ ತಿಳಿಯೋದಿಲ್ಲ.

ಹಿಂದುಳಿದ ಪ್ರದೇಶಗಳಲ್ಲಿ ಈಗ್ಲೂ ಆರೋಗ್ಯ (Health) ಹದಗೆಟ್ರೆ ವೈದ್ಯರ ಬಳಿ ಹೋಗುವ ಬದಲು ದೆವ್ವ (Ghost) ಬಿಡಿಸೋಕೆ ಹೋಗೋರಿದ್ದಾರೆ. ಈಗ ದೆವ್ವದ ಗುಂಗಿನಲ್ಲಿ ಮಹಿಳೆಯೊಬ್ಬಳ ಪ್ರಾಣ ಹೋಗಿದೆ. ಭೂತ ಲಾಸ್ಟ್ ಡೇಟ್ ನೀಡಿದೆ ಎನ್ನುತ್ತಿದ್ದ ಮಹಿಳೆ, ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾಳೆ. ಈ ಘಟನೆ ನಡೆದಿರೋದು ಉತ್ತರ ಪ್ರದೇಶ(Uttar Pradesh) ದಲ್ಲಿ. ಅದ್ರ ಬಗ್ಗೆ ಡಿಟೇಲ್ ಇಲ್ಲಿದೆ. ಉತ್ತರ ಪ್ರದೇಶದ ಝಾನ್ಸಿಯಲ್ಲಿ ಈ ಘಟನೆ ನಡೆದಿದೆ. ಝಾನ್ಸಿಯ ತೆಹ್ರಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಭಟ್ಟ್ ಪುರ ಗ್ರಾಮದಲ್ಲಿ ವಾಸವಿದ್ದ ಶಿವಾನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.  

Latest Videos

ಕೇರಳದಲ್ಲಿ ಹಲಸು ಕ್ರಾಂತಿ ಸೃಷ್ಟಿಸಿದ ವಾಟ್ಸಾಪ್ ಗ್ರೂಪ್; ಗ್ರಾಮೀಣ ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟ'ಚಕ್ಕಾಕೂಟಂ'

ದೆವ್ವದ ಕಾಟ: ಶಿವಾನಿ ಪದೇ ಪದೇ ನನ್ನನ್ನು ಒಬ್ಬ ಮಹಿಳೆ ಹಿಂಬಾಲಿಸುತ್ತಿದ್ದಾಳೆ ಎಂದು ಹೇಳ್ತಿದ್ದಳಂತೆ. ಆ ಮಹಿಳೆ ತನಗೆ ಎರಡು ದಿನ ಟೈಂ ನೀಡಿದ್ದಾಳೆ ಎಂದೂ ಬಡಬಡಾಯಿಸುತ್ತಿದ್ದಳಂತೆ. ಕುಟುಂಬಸ್ಥರು ಇದನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಮಂತ್ರವಾದಿ ಬಳಿ ಕರೆದುಕೊಂಡು ಹೋಗಿದ್ದಾರೆ. ಇಷ್ಟಾದ್ರೂ ಪ್ರಯೋಜನವಾಗಿಲ್ಲ. ಶಿವಾನಿ ಹೇಳಿದಂತೆ ಎರಡು ದಿನಗಳ ನಂತ್ರ ಬೆಂಕಿ ಹಚ್ಚಿಕೊಂಡಿದ್ದಾಳೆ. ಸುಟ್ಟು ಕರಕಲಾಗಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಶಿವಾನಿ ಸಾವನ್ನಪ್ಪಿದ್ದಾಳೆ.   

ಅತ್ತೆ ಮನೆಗೆ ಬಂದ ನಂತ್ರ ಶುರುವಾಯ್ತು ದೆವ್ವದ ಕಾಟ : ಶಿವಾನಿ ಆರಂಭದಲ್ಲಿ ಚೆನ್ನಾಗೆ ಇದ್ದಳು. ಆಕೆಗೆ ಒಂದು ತಿಂಗಳ ಹಿಂದಷ್ಟೆ  ಝಾನ್ಸಿಯ ಕಿಶೋರ್ ಎಂಬಾತನ ಜೊತೆ ಮದುವೆಯಾಗಿದೆ. ಮದುವೆಯಾಗಿ ಅತ್ತೆಯ ಮನೆಗೆ ಬಂದ ನಂತರ ಶಿವಾನಿ ವಿಚಿತ್ರವಾಗಿ ವರ್ತಿಸಲು ಶುರು ಮಾಡಿದ್ದಾಳೆ. ಮಹಿಳೆಯೊಬ್ಬಳು ತನ್ನನ್ನು ಹಿಂಬಾಲಿಸುತ್ತಿದ್ದಾಳೆ ಎಂದು ಶಿವಾನಿ ಹೇಳುತ್ತಿದ್ದಳಂತೆ.

ಬ್ರಾ, ಪ್ಯಾಂಟಿ ಬಗ್ಗೆ ಅಮಿತಾಬ್ ಬಚ್ಚನ್ ಟ್ವೀಟ್ ವೈರಲ್, ಟ್ರೋಲಾದ ಬಿಗ್‌ ಬಿ

ಮೂರು ವರ್ಷದ ಹಿಂದೆಯೇ ಸತ್ತಿದ್ದ ಮಹಿಳೆ!: ಶಿವಾನಿ ಅತ್ತೆ ಮನೆಗೆ ಬಂದ ನಂತ್ರ ಹೇಳ್ತಿದ್ದ ಮಹಿಳೆ ಮೂರು ವರ್ಷದ ಹಿಂದೆಯೇ ಸಾವನ್ನಪ್ಪಿದ್ದಳಂತೆ. ಶಿವಾನಿ ಬಾಯಲ್ಲಿ ಆಕೆ ಹೆಸರು ಕೇಳಿ ಮನೆಯವರು ಕಂಗಾಲಾಗಿದ್ದಾರೆ. ಶಿವಾನಿಯನ್ನು ಭೂತ ಬಿಡಿಸುವ ತಾಂತ್ರಿಕನ ಬಳಿ ಕರೆದೊಯ್ದಿದ್ದಾರೆ. ಶಿವಾನಿ ಪದೇ ಪದೇ ಆ ಮಹಿಳೆಯೊಂದಿಗೆ ಮಾತನಾಡುತ್ತಿದ್ದಳು ಎಂದು ಕುಟುಂಬದವರು ಹೇಳುತ್ತಾರೆ.

ಬೆಂಕಿ ಹಚ್ಚಿಕೊಂಡ ಮೇಲೂ ಅದೇ ಮಾತನಾಡಿದ ಶಿವಾನಿ : ಇನ್ನೆರಡು ದಿನ ಗಡುವು ಎಂದಿದ್ದ ಶಿವಾನಿ ಸರಿಯಾಗಿ ಎರಡನೇ ದಿನ ಬೆಂಕಿ ಹಚ್ಚಿಕೊಂಡಿದ್ದಾಳೆ. ಬೆಂಕಿಯಲ್ಲಿ ಸುಡ್ತಿದ್ದ ವೇಳೆಯೂ ಶಿವಾನಿ, ಮಹಿಳೆ ಬೆಂಕಿ ಹಚ್ಚಿಕೊಳ್ಳುವಂತೆ ನನ್ನನ್ನು ಒತ್ತಾಯಿಸಿದ್ದಾಳೆ. ಆಕೆ ಹೇಳಿದಂತೆ ಕೇಳಿದೆ ಎಂದು ಶಿವಾನಿ ಹೇಳಿದ್ದಾಳಂತೆ. ಸ್ಥಳಕ್ಕೆ ಬಂದ ಪೊಲೀಸರು ಹಾಗೂ ವೈದ್ಯರು, ಕುಟುಂಬಸ್ಥರ ಮಾತು ಕೇಳಿ ದಂಗಾಗಿದ್ದಾರೆ. ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ವರದಕ್ಷಿಣೆ ಕಾಟಕ್ಕೆ ಶಿವಾನಿ ಬಲಿಯಾಗಿರಬಹುದೆಂದು ಶಂಕಿಸಲು, ಶಿವಾನಿ ಮನೆಯವರು ಯಾವುದೇ ದೂರನ್ನು ದಾಖಲಿಸಿಲ್ಲ. 

click me!