ಪಾಕಿಸ್ತಾನ ಸಂಸತ್ತಿನಲ್ಲೂ ಸದ್ದು ಮಾಡಿದ ಯಡಿಯೂರಪ್ಪ ಹೇಳಿಕೆ!

Mar 1, 2019, 6:40 PM IST

ಬಾಲಕೋಟ್ ಸರ್ಜಿಕಲ್ ದಾಳಿಯಿಂದ ರಾಜ್ಯದಲ್ಲಿ 22 ಲೋಕಸಭಾ ಸೀಟು ಗೆಲ್ಲಲು ಅನುಕೂಲವಾಗುತ್ತೆ ಎಂದಿದ್ದ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿಕೆ ಪಾಕಿಸ್ತಾನ ಸಂಸತ್ತಿನಲ್ಲೂ ಪ್ರತಿಧ್ವನಿಸಿದೆ.  ಸರ್ಜಿಕಲ್ ದಾಳಿಯನ್ನು ರಾಜಕೀಯವಾಗಿ ಬಳಸಿಕೊಂಡ ಯಡಿಯೂರಪ್ಪ ಹೇಳಿಕೆಗೆ ಭಾರತದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ, ತಾನು ಆ ರೀತಿ ಹೇಳಿಲ್ಲ ಎಂದು ಅವರು ಸ್ಪಷ್ಟೀಕರಣ ನೀಡಿದ್ದರು.