Sep 20, 2021, 11:14 AM IST
ನವದೆಹಲಿ (ಸೆ. 20): ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕಳೆದರಡು ದಿನಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಕಾಂಗ್ರೆಸ್ ಪಾಲಿಗಿದ್ದ ಅತಿದೊಡ್ಡ ಭರವಸೆ ಎನಿಸಿಕೊಂಡವರು ಅಮರೀಂದರ್ ಸಿಂಗ್. ಇವರ ರಾಜೀನಾಮೆ ಕಾಂಗ್ರೆಸ್ಗೆ ಸಂಕಷ್ಟ ತಂದೊಡ್ಡಿದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಅಮರೀಂದರ್ ಮೇಲಿನ ಗೌರವಕ್ಕಿಂತ ಸಿಧು ಮೇಲಿನ ಪ್ರೀತಿಯೇ ಜಾಸ್ತಿ. ಇದನ್ನೇ ಬಂಡವಾಳ ಮಾಡಿಕೊಂಡ ಸಿಧು, ಅಮರೀಂದರ್ ಸ್ಥಾನಕ್ಕೆ ಕುತ್ತು ತಂದಿದ್ದಾರೆ ಎನ್ನಲಾಗುತ್ತಿದೆ.
ಚುನಾವಣೆಗೆ ಮುನ್ನ ಪಂಜಾಬ್ ಸಿಎಂ ರಾಜೀನಾಮೆ: ಕ್ಯಾಪ್ಟನ್ ಇಲ್ಲದೇ ಬಡವಾಯ್ತಾ ಕಾಂಗ್ರೆಸ್.?
ಇನ್ನೊಂದು ಕಡೆ ಸಿಧು ಮೇಲೆ ಅಮರೀಂದರ್ 'ದೇಶದ್ರೋಹಿ' ಎನ್ನುವ ಆರೋಪ ಮಾಡಿದ್ದಾರೆ. ಸಿಧು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪಾಕ್ ಸೇನಾ ಮುಖ್ಯಸ್ಥ ಬಜ್ವಾರನ್ನು ಅಪ್ಪಿಕೊಳ್ಳುತ್ತಾರೆ. ಅವರು ದೇಶದ್ರೋಹಿ. ದೇಶದ ಭದ್ರತಾ ಹಿತದೃಷ್ಟಿಯಿಂದ ಸಿಧು ಸಿಎಂ ಆಗುವುದನ್ನು ವಿರೋಧಿಸುವೆ. ಅವರು ಮುಖ್ಯಮಂತ್ರಿ ಆದರೆ ದೊಡ್ಡ ದುರಂತ. ದೇಶದ ಭದ್ರತೆಗೆ ಅವರಿಂದ ಬೆದರಿಕೆ ಇದೆ ಎಂದಿದ್ದಾರೆ.