ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ 7 ಕನ್ನಡಿಗರ ರಕ್ಷಣೆ!

Aug 23, 2021, 3:07 PM IST

ಬೆಂಗಳೂರು(ಆ.21): ಅಷ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ವಿಮಾನದ ಮೂಲಕ ಕರೆತರಲಾಗಿದ್ದು, ಈ ಪೈಕಿ ರಾಜ್ಯದ ಏಳು ಮಂದಿ ಕನ್ನಡಿಗರು ಸುರಕ್ಷಿತವಾಗಿ ದೇಶಕ್ಕೆ ಮರಳಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್‌ಗೆ ಕನ್ನಡಿಗರು ಬಂದಿದ್ದು, ಅಲ್ಲಿಂದ ಕರ್ನಾಟಕ ತಲುಪಲಿದ್ದಾರೆ.

ಬಳ್ಳಾರಿ ಜಿಲ್ಲೆ ಸಂಡೂರಿನ ತನ್ವೀನ್‌ ಅಬ್ದುಲ್‌, ಮಂಗಳೂರಿನ ಬಜ್ಪೆ ಮೂಲದ ದಿನೇಶ್‌ ರೈ, ಮೂಡಬಿದಿರೆಯ ಜಗದೀಶ್‌ ಪೂಜಾರಿ, ಕಿನ್ನಿಗೋಳಿಯ ಡೇವಿಡ್‌ ಡಿಸೋಜಾ, ಬಜೈ ಶ್ರವಣ್‌ ಅಂಚನ್‌, ಉಳ್ಳಾಲದ ಪ್ರಸಾದ್‌ ಆನಂದ್‌, ಬೆಂಗಳೂರಿನ ಮಾರತ್‌ಹಳ್ಳಿಯ ಹಿರಾಕ್‌ ದೇಬನಾಥ್‌ ಅವರು ಗಾಜಿಯಾಬಾದ್‌ ತಲುಪಿದ್ದಾರೆ. ಮಂಗಳೂರಿನ ಥೆರೇಸಾ ಕ್ರಾಸ್ಟಾಅವರು ಕಾಬೂಲ್‌ನಲ್ಲಿದ್ದು, ಅಲ್ಲಿಂದ ಇಟಲಿಗೆ ತೆರಳುವ ಇಚ್ಛೆಯನ್ನು ವಿದೇಶಾಂಗ ಸಚಿವಾಲಯದ ಮುಂದೆ ವ್ಯಕ್ತಪಡಿಸಿದ್ದಾರೆ.