ಕೊರೋನಾ ನಡುವೆ ಕ್ರೆಡಿಟ್‌ಗಾಗಿ 'ಕೈ' ನಾಯಕರ ಕಿತ್ತಾಟ..!

May 2, 2020, 1:04 PM IST

ವಿಜಯಪುರ(ಮೇ.02): ಕೊರೋನಾ ವೈರಸ್ ಹೊಡೆತಕ್ಕೆ ಇಡೀ ವಿಜಯಪುರ ಜಿಲ್ಲೆ ತತ್ತರಿಸಿ ಹೋಗಿದ್ದು, ರೆಡ್‌ ಝೋನ್ ಅಲರ್ಟ್‌ನಲ್ಲಿದೆ. ಇಂತಹುದರ ನಡುವೆ ಕೊರೋನಾ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಜನಪ್ರತಿನಿಧಿಗಳು ಮಾತ್ರ ಕ್ರೆಡಿಟ್‌ ವಾರ್‌ನಲ್ಲಿ ಬ್ಯುಸಿ ಆಗಿದ್ದಾರೆ.

ಹೌದು, ವಿಜಯಪುರದಲ್ಲಿ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಲೇ ಕ್ರೆಡಿಟ್‌ಗಾಗಿ ಕಿತ್ತಾಟ ನಡೆಸುತ್ತಿದ್ದಾರೆ. ಅಂದಹಾಗೆ ಏಪ್ರಿಲ್ 20ರಂದು ಮುಳವಾಡ ಏತ ನೀರಾವರಿ ಎಂ.ಬಿ. ಪಾಟೀಲ್ ಚಾಲನೆ ನೀಡಿದ್ದು, ಇಂಡಿ ಶಾಸಕ ಯಶವಂತರಾಯ ಪಾಟೀಲ್ ಕೆಂಗಣ್ಣಿಗೆ ಗುರಿಯಾಗಿದೆ.

ನಮ್ಮ ಜನರಿಗೆ ಬುದ್ಧಿ ಯಾವಾಗ್‌ ಬರುತ್ತೆ ಸ್ವಾಮಿ: ಲಾಕ್‌ಡೌನ್‌ಗೆ ಕ್ಯಾರೆ ಎನ್ನದ ಬೆಳಗಾವಿ ಜನ..!

ಪರಿಸ್ಥಿತಿ ಹೀಗಿರುವಾಗಲೇ ಎಂ.ಬಿ. ಪಾಟೀಲ್ ಪುತ್ರ ಹಚ್ಚಿದ ಕ್ರೆಡಿಟ್ ಕಿಡಿ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್ ಮುಂಗೋಪಕ್ಕೆ ಕಾರಣವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.