Aug 27, 2020, 12:06 PM IST
ಬೆಂಗಳೂರು(ಆ.27) ಪರಿಸರ ಪ್ರೇಮಿ ಸೋಗಿನಲ್ಲಿ ವನ್ಯಜೀವಿ ಮಂಡಳಿಯ ಮಾಜಿ ವಾರ್ಡನ್ ಕಾಡು ಪ್ರಾಣಿಗಳನ್ನು ಕೊಂದಿದ್ದಾರೆ. ಇವರು ಪ್ರಭಾವಿ ನಾಯಕನ ಶ್ರೀರಕ್ಷೆ ಬಲದಿಂದ ಕಾಡಿನಲ್ಲಿ ಬೇಟೆಯಾಡುತ್ತಿದ್ದರೆನ್ನಲಾಗಿದೆ.
ಹೌದು ಭದ್ರಾ ಅಭಯಾರಣ್ಯದ ಮಾಜಿ ವಾರ್ಡನ್, ಕಾಂಗ್ರೆಸ್ ಮುಖಂಡ ಸತೀಶ್ಗೌಡ ತನ್ನ ನಾಲ್ವರು ಸ್ನೇಹಿತರ ಗುಂಪು ಕಟ್ಟಿಕೊಂಡು ಮಂಗಳವಾರ ರಾಥ್ರಿ ಕಾಡಿನಲ್ಲಿ ಶಿಕಾರಿ ಮಾಡಿದ್ದಾರೆ.
ಅಲ್ಲದೇ ಕಡವೆ ಬರ್ಕಾಕೊಂದು ಮುತ್ತೋಡಿ, ಹೊನ್ನಾಳ ಗ್ರಾಮದಲ್ಲಿ ಮಾಂಸವನ್ನೂ ಮಾರಾಟ ಮಾಡಿದ್ದಾರೆ. ಇನ್ಉ ಅಧಿಕಾರಿಗಳ ದಾಳಿ ವೇಳೆ ಕಾಂಗ್ರೆಸ್ ಮುಖಂಡ ಸತೀಶ್ ಗೌಡ ಲಪರಾರಿಯಾಗಿದ್ಉ, ಸದ್ಯ ಆತನ ಹುಡುಕಾಟ ಮುಂದುವರೆದಿದೆ. ಇನ್ನುಳಿದ ನಾಲ್ವರನ್ನು ಬಂಧಿಸಿದ ಅರಣ್ಯಾಧಿಕಾರಿಗಳು ನ್ಯಾಯಾಲಯದೆದುರು ಹಾಜರುಪಡಿಸಿದ್ದಾರೆ.