ಜೂ. 28 ರಿಂದ ಮದುವೆಗೆ ಅನುಮತಿ; ಕಲ್ಯಾಣ ಮಂಟಪದ ಮೇಲೆ ನಿಗಾಕ್ಕೆ ಮಾರ್ಷಲ್ಸ್ ನೇಮಕ

Jun 27, 2021, 3:02 PM IST

ಬೆಂಗಳೂರು (ಜೂ. 27): ಜೂ. 28 ರಿಂದ ಕಲ್ಯಾಣ ಮಂಟಪ, ರೆಸಾರ್ಟ್‌ಗಳಲ್ಲಿ ಮದುವೆಗೆ ಅನುಮತಿ ನೀಡಲಾಗಿದೆ. 40 ಮಂದಿಗೆ ಮಾತ್ರ ಅವಕಾಶ ಕೊಡಲಾಗಿದೆ. 'ಮದುವೆಗಳು ಗೈಡ್‌ಲೈನ್ಸ್ ಪ್ರಕಾರವೇ ನಡೆಯಬೇಕು. ತಪ್ಪಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಮದುವೆಗೆ ಬರುವವರ ಮಾಹಿತಿ ನೀಡಬೇಕು. ಮಾಹಿತಿ ನೀಡಿದವರು ಬಿಟ್ಟು ಬೇರೆಯವರು ಇರುವಂತಿಲ್ಲ. ಕಲ್ಯಾಣ ಮಂಟಪದ ಮೇಲೆ ನಿಗಾಕ್ಕೆ ಮಾರ್ಷಲ್ಸ್‌ಗಳನ್ನು ನೇಮಕ ಮಾಡಲಾಗುವುದು' ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.