15 ಗಂಟೆಗಳಿಂದ ಮಾಜಿ ಸಚಿವ ನಾಗೇಂದ್ರ ನಿವಾಸದಲ್ಲಿ ಇಡಿ ತಂಡ, ಶುರುವಾಯ್ತು ಬಂಧನ ಭೀತಿ!

Jul 10, 2024, 11:16 PM IST

ಕರ್ನಾಟಕದಲ್ಲಿ ನಡೆದಿರುವ ವಾಲ್ಮೀಕಿ ನಿಗಮದ ಹಗರಣ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ತಲೆನೋವು ತಂದಿದೆ. ಇಂದು ಪ್ರಕರಣ ಸಂಬಂಧ ದಿಢೀರ್ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬರೋಬ್ಬರಿ 19 ಕಡೆ ದಾಳಿ ನಡೆದಿದೆ. ಈ ಪೈಕಿ ಮಾಜಿ ಸಚಿವ ನಾಗೇಂದ್ರ ಮನೆಯಲ್ಲಿ ಇಡಿ ಅಧಿಕಾರಿಗಳ ತಂಡ ಶೋಧ ಕಾರ್ಯ ನಡೆಸುತ್ತಿದೆ. 15 ಗಂಟೆಗಳಿಂದ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಮಾಜಿ ಸಚಿವ ನಾಗೇಂದ್ರಗೆ ಬಂಧನ ಭೀತಿ ಶುರುವಾಗಿದೆ. ಆದರೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಹಗರಣದಲ್ಲಿ ಮಾಜಿ ಸಚಿವರ ಪಾತ್ರವಿಲ್ಲ, ಅಧಿಕಾರಿಗಳು ದುಡ್ಡು ತಿಂದಿದ್ದಾರೆ ಎಂದಿದ್ದಾರೆ.