Mar 1, 2022, 11:52 AM IST
ಯುದ್ಧಪೀಡಿತ ಉಕ್ರೇನ್ನಿಂದ (Ukraine) ಹಂತ ಹಂತವಾಗಿ ಕನ್ನಡಿಗರನ್ನು ವಾಪಸ್ ಕರೆತರಲಾಗುತ್ತಿದೆ. 'ಆಪರೇಷನ್ ಗಂಗಾ' (Operaratin Ganga) ಕಾರ್ಯಾಚರಣೆ ಮುಂದುವರೆದಿದೆ. ಇಂದು ಐವರು ಕನ್ನಡಿಗರು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ರಾಣಿಬೆನ್ನೂರಿನ ಮೈನಾ, ಹಿರಿಯೂರಿನ ಶಕ್ತಿ ಶ್ರೀ ಸೇರಿದಂತೆ ಐವರು ವಾಪಸ್ಸಾಗಿದ್ದಾರೆ. ಮಕ್ಕಳನ್ನು ನೋಡಿ ಪೋಷಕರು ಖುಷ್ ಆಗಿದ್ದಾರೆ. ಉಕ್ರೇನ್ನ ಸ್ಥಿತಿ ಹೇಗಿದೆ ಎಂದು ವಿದ್ಯಾರ್ಥಿನಿಯರು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.