Jan 18, 2022, 2:45 PM IST
ಬೆಳಗಾವಿ (ಜ. 18): ರೂಬೆಲ್ಲಾ ಚುಚ್ಚುಮದ್ದು (Rubella Vaccine) ಪಡೆದು ಮೂವರು ಮಕ್ಕಳ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ (Dr. Sudhakar) ಅವರ ಸೂಚನೆ ಮೇರೆಗೆ ಇಬ್ಬರು ಹಿರಿಯ ಅಧಿಕಾರಿಗಳನ್ನು ತನಿಖಾಧಿಕಾರಿ ತನಿಖೆಗಾಗಿ ನೇಮಿಸಲಾಗಿದೆ.
Belagavi: ಸೆಪ್ಟಿಕ್ ಶಾಕ್ ಸಿಂಡ್ರೋಮ್ನಿಂದ ಮಕ್ಕಳ ಸಾವು ಎಂದು ವರದಿ, ಹೆಚ್ಚಿನ ತನಿಖೆಗೆ ಸರ್ಕಾರದ ಆದೇಶ
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಿಬ್ಬಂದಿ ಕರ್ತವ್ಯಲೋಪ ಕೂಡ ಇದರಲ್ಲಿ ಕಂಡುಬಂದಿದ್ದು, ಇಬ್ಬರನ್ನೂ ಅಮಾನತು ಮಾಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಆದೇಶಿಸಿದ್ದಾರೆ.
'ಚುಚ್ಚುಮದ್ದು ನೀಡಿದ ನರ್ಸ್ ಸಲ್ಮಾಗೆ ಕಠಿಣ ಶಿಕ್ಷೆಯಾಗಬೇಕು. ಬೇರೆ ಮಕ್ಕಳಿಗೆ ಈ ಪರಿಸ್ಥಿತಿ ಬರಬಾರದು' ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ.