ಜೈಲಿನಲ್ಲಿ ಸರ್ಕಾರದ ದುಡ್ಡು ಉಳಿಸಲು ಹೊರಟ ದರ್ಶನ್, ಹೈಕೋರ್ಟ್‌ಗೆ ಅರ್ಜಿ!

Jul 9, 2024, 11:22 PM IST

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಇದೀಗ ಸರ್ಕಾರದ ದುಡ್ಡು ಉಳಿಸಲು ಮುಂದಾಗಿದ್ದಾರೆ. ಈ ಕುರಿತು ದರ್ಶನ್ ಪರ ವಕೀಲರು ಹೈಕೋರ್ಟ್ ರಿಟ್ ಪಿಟೀಶನ್ ಸಲ್ಲಿಸಿದ್ದಾರೆ. ದರ್ಶನ್‌ಗೆ ಜೈಲಿನ ಊಟದ ಬದಲು ಮನೆ ಊಟ ಮಾಡಲು ಕೋರ್ಟ್ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಇದರಿಂದ ಸರ್ಕಾರದ ದುಡ್ಡು ಉಳಿಯಲಿದೆ ಎಂದು ರಿಟ್ ಅರ್ಜಿ ಸಲ್ಲಿಸಲಾಗಿದೆ. ಜೈಲೂಟದಿಂದ ನಟ ದರ್ಶನ್ ಆರೋಗ್ಯ ಹದಗೆಟ್ಟಿದೆ. ತೂಕ ಇಳಿದಿದೆ. ಹೀಗಾಗಿ ಕೋರ್ಟ್ ನಟ ದರ್ಶನ್‌ಗೆ ಮನೆಯೂಟಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.