ನಿಯಮ ಪಾಲಿಸದಿದ್ರೆ ಲಾಕ್‌ಡೌನ್ ಎಚ್ಚರಿಕೆ ನೀಡಿದ ಡಾ. ಸುಧಾಕರ್

Apr 12, 2021, 2:10 PM IST

ಬೆಂಗಳೂರು (ಏ. 12): ಸಾರ್ವಜನಿಕರು ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸದೆ ಕೊರೋನಾ ಪರಿಸ್ಥಿತಿ ಕೈಮೀರುವ ಹಂತಕ್ಕೆ ಬಂದರೆ ರಾಜ್ಯದಲ್ಲಿ ಲಾಕ್‌ಡೌನ್‌ ಹೇರುವಂತಹ ಸ್ಥಿತಿ ನಿರ್ಮಾಣವಾಗಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್‌ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಸೋಂಕು ಹೆಚ್ಚಳ : ಮತ್ತೆ ಲಾಕ್‌ಡೌನ್ ಸುಳಿವು ಕೊಟ್ಟ ಸಿಎಂ

'ನಾವೆಷ್ಟೇ ನಿರ್ಬಂಧ ಹಾಕಿದರೂ ಜನರೂ ಸಹಕರಿಸದಿದ್ರೆ ಲಾಕ್‌ಡೌನ್ ಅನಿವಾರ್ಯವಾಗುತ್ತದೆ. ನಮಗೆ ನಾವೇ ನಿರ್ಬಂಧ ಹಾಕಿಕೊಳ್ಳುವುದು ಅಗತ್ಯ. ಲಾಕ್‌ಡೌನ್ ಮಾಡುವುದಕ್ಕೆ ನಮ್ಮ ಸರ್ಕಾರಕ್ಕೆ ಸುತಾರಾಂ ಇಷ್ಟವಿಲ್ಲ. ನಿಯಂತ್ರಣ ಮೀರಿದರೆ ಅನಿವಾರ್ಯವಾಗುತ್ತದೆ' ಎಂದು ಸುಧಾಕರ್ ಹೇಳಿದ್ದಾರೆ.