Covid Norms : ಜನರಿಗೊಂದು ರೂಲ್ಸ್, ನಾಯಕರಿಗೊಂದು ರೂಲ್ಸ್ - ಇದ್ಯಾವ ನ್ಯಾಯ?

Jan 6, 2022, 2:00 PM IST

ಬೆಂಗಳೂರು (ಡಿ.06): ಜನಪ್ರತಿನಿಧಿಗಳೇ ಕೊರೋನಾ (Corona) ರೂಲ್ಸ್  ಬ್ರೇಕ್  ಆಗಿದೆ.  ಜನರಿಗೊಂದು ರೂಲ್ಸ್, ನಾಯಕರಿಗೊಂದು  ರೂಲ್ಸ್ ಎನ್ನುವಂತಾಗಿದೆ. ಕೋವಿಡ್ (Covid) ನಿಯಮಗಳ ಸ್ಥಿತಿ.  ಅಂತರ ಕಾಪಾಡಿಕೊಂಡು  ಜನರಿಗೆ ಮಾದರಿಯಾಗಬೇಕಿದ್ದವರೆ ರೂಲ್ಸ್ ಬ್ರೇಕ್ ಮಾಡಿದ್ದಾರೆ. 

Karnataka Covid Crisis : ಲಾಕ್ ಡೌನ್ ಮಾಡುವ ಬದಲು ಸರ್ಕಾರ ಜನರಿಗೆ ವಿಷ ಕೊಟ್ಟು ಬಿಡಲಿ

ನಿಯಮಗಳನ್ನು ಕಾಪಾಡುವ ಮೊದಲ ಜವಾಬ್ದಾರಿ ಅದನ್ನು ರೂಪಿಸಿದವರಿಗೆ ಇರಬೇಕಿದ್ದು, ತಮ್ಮ ಜವಾಬ್ದಾರಿಯನ್ನೇ ಮರೆತಿದ್ದಾರೆ ಮುಖಂಡರು. ವಿಧಾನ ಸೌಧಕ್ಕೆ ಇಂದು ನೂರಾರು ಬೆಂಬಲಿಗರ ಜೊತೆಗೆ ಆಗಮಿಸಿದ್ದಾರೆ.  ಇಲ್ಲಿ ಎಲ್ಲಾ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದಾರೆ.  ರಾಜ್ಯದಲ್ಲಿ ಈಗಾಗಲೇ ದಿನದಿನವೂ ಕೊರೋನಾ ಸೋಂಕಿತರ ಸಂಖ್ಯೆ ಹಾಗೂ ಒಮಿಕ್ರಾನ್‌ ಕೇಸುಗಳು ಜಾಸ್ತಿಯಾಗುತ್ತಲೇ  ಇದ್ದು, ಈ ನಿಟ್ಟಿನಲ್ಲಿ ಹಲವು ನಿಯಮಾಳಿಗಳನ್ನು ಜಾರಿ ಮಾಡಲಾಗಿದೆ. ಆದರೆ ಜನ ಪ್ರತಿನಿಧಿಗಳೇ ಇವುಗಳಿಗೆ ಕೇರ್ ಎನ್ನುತ್ತಿಲ್ಲ.