ಗಣೇಶೋತ್ಸವ ಆಚರಣೆ ಅನುಮತಿಗೆ ಸರ್ಕಾರದಲ್ಲೇ ಗೊಂದಲ, ನಾಳೆ ಹೊರಬೀಳಲಿದೆ ನಿರ್ಧಾರ!

Sep 4, 2021, 12:02 PM IST

ಬೆಂಗಳೂರು (ಸೆ.. 04): ಗಣೇಶೋತ್ಸವ ಅನುಮತಿ ವಿಚಾರದಲ್ಲಿ ಸರ್ಕಾರದಲ್ಲಿ ಗೊಂದಲವಿದೆ. ಇಂದಿನ ಸಂಪುಟ ಸಭೆಯಲ್ಲಿ ಅನುಮತಿ ನೀಡುವ ಕುರಿತು ಚರ್ಚೆ ನಡೆಯಲಿದೆ. ಷರತ್ತಿನ ಅನುಮತಿಯ ಸರ್ಕಾರದ ಕ್ರಮಕ್ಕೆ ಸ್ವಪಕ್ಷೀಯರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು ಗಣೇಶೋತ್ಸವ ಆಚರಣೆ ಹಾಗೂ ಸೆಸ್ ಇಳಿಕೆ ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ. ನಾಳೆ ತಜ್ಞರ ಜೊತೆ ಚರ್ಚೆ ನಡೆಸಲಿದ್ದಾರೆ. ನಾಳೆ ಗಣೇಶೋತ್ಸವ ಆಚರಣೆ ಸಂಬಂಧ ಅಂತಿಮ ನಿರ್ಧಾರ ಹೊರ ಬೀಳಲಿದೆ. 

ನಾವು ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದವರು, ಗಣೇಶ ಹಬ್ಬ ಮಾಡ್ತೇವೆ: ಈಶ್ವರಪ್ಪ ಶಪಥ