Feb 15, 2021, 6:30 PM IST
ಬೆಂಗಳೂರು (ಫೆ.15): ಮೊದಲೇ ಮೀಸಲಾತಿ ಹೋರಾಟಗಳಿಂದ ಪೇಚಿಗೆ ಸಿಲುಕಿರುವ ಬಿ.ಎಸ್.ಯಡಿಯೂರಪ್ಪ ಸರ್ಕಾರಕ್ಕೆ ಸಚಿವ ಉಮೇಶ್ ಕತ್ತಿ ಹೇಳಿಕೆ ಮತ್ತಷ್ಟು ಇಕ್ಕಿಟ್ಟಿಗೆ ಸಿಲುಕಿಸಿದೆ. ಬಿಪಿಎಲ್ ಕಾರ್ಡ್ಗಳಿಗೆ ಕೈ ಹಾಕಲು ಹೋಗಿ ಸಚಿವರು ಕೈಸುಟ್ಟುಕೊಂಡಿದ್ದಾರೆ.
ಇದನ್ನೂ ನೋಡಿ | ಬಿಪಿಎಲ್ ಕಾರ್ಡ್ ವಿವಾದ: ಅಚ್ಚರಿ ಮೂಡಿಸಿದ ಸಿದ್ದರಾಮಯ್ಯ ಪ್ರತಿಕ್ರಿಯೆ!...
ಮನೆಯಲ್ಲಿ ಟೀವಿ ಇದ್ದರೆ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಉಮೇಶ್ ಕತ್ತಿ ಹೇಳಿಕೆ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದೆ. ಈಗ ಡ್ಯಾಮೇಜ್ ಕಂಟ್ರೋಲ್ಗೆ ಬಿಎಸ್ವೈ ಸರ್ಕಾರ ಮುಂದಾಗಿದೆ. ಹಾಗಾದ್ರೆ ಕತ್ತಿ ತಮ್ಮ ಹೇಳಿಕೆ ಹಿಂಪಡೆಯುತ್ತಾರಾ? ಕಾದು ನೋಡ್ಬೇಕು...