ಹಿಂದೂ ಕಾರ್ಯಕರ್ತನ ಹತ್ಯೆ ಖಂಡಿಸಿ ಅಮಿತ್‌ ಶಾಗೆ ಪತ್ರ; ಶೋಭಾ ಕರಂದ್ಲಾಜೆಗೆ ಜೀವ ಬೆದರಿಕೆ

May 5, 2020, 1:43 PM IST

ಬೆಂಗಳೂರು (ಮೇ. 05): ದುಬೈ, ಮಸ್ಕತ್‌ನಿಂದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ನಿರಂತರವಾಗಿ ಪ್ರಾಣ ಬೆದರಿಕೆ ಬರುತ್ತಿರುವುದಾಗಿ ಸ್ವತಃ ಕರಂದ್ಲಾಜೆಯವರೇ ಬಹಿರಂಗಪಡಿಸಿದ್ದಾರೆ.  ಕೇರಳದ ಹಿಂದೂ ಕಾರ್ಯಕರ್ತನನ್ನು ಮಸ್ಕತ್‌ನಲ್ಲಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಖಂಡಿಸಿ ಗೃಹ ಸಚಿವ ಅಮಿತ್‌ಶಾಗೆ ಪತ್ರ ಬರೆದಿದ್ದೆ. ಇದರಿಂದ ನನಗೆ ದಿನಾ ನೂರಾರು ಬೆದರಿಕೆ ಕರೆಗಳು ಬರುತ್ತಿವೆ. ಜಿಹಾದಿಗಳು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಹಲವಾರು ಬಾರಿ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಯಾವುದೇ ಕ್ರಮ ಕೈಗೊಂಡಿಲ್ಲ. ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ. 

ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ದೇಶದಲ್ಲಿ ಕೊರೋನಾ ಸೋಂಕು ಏಕಾಏಕಿ ಏರಿಕೆ!