Cabinet Reshuffle: 2 ಅವಧಿಯಲ್ಲಿ ಮಂತ್ರಿಯಾದವರಿಗೆ ಕೊಕ್.?

Mar 13, 2022, 3:12 PM IST

ಬೆಂಗಳೂರು (ಮಾ. 13): ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಬೊಮ್ಮಾಯಿ ಸೂಚನೆ ಕೊಟ್ಟಿದ್ದಾರೆ. 'ವರಿಷ್ಠರು ಸೂಚನೆ ಕೊಟ್ಟಿಲ್ಲ. ಕರೆದರೆ ದೆಹಲಿಗೆ ಹೋಗುತ್ತೇನೆ' ಎಂದು ಸಿಎಂ ಹೇಳಿದ್ದಾರೆ.  ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಅವರಲ್ಲಿನ ಉತ್ಸಾಹ, ನಿರೀಕ್ಷೆ ಹೆಚ್ಚಾಗಿದೆ. 

KPCC: 300 ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿ ಜೊತೆ ದೆಹಲಿಗೆ ಹಾರಿದ ಡಿಕೆಶಿ

ಪುನಾರಚನೆಯೇ ಅಂತಿಮಗೊಂಡಲ್ಲಿ ವಯಸ್ಸಿನಲ್ಲಿ ಹಿರಿಯರಾಗಿರುವ ಅಥವಾ ಎರಡು ಬಾರಿ ಸಚಿವರಾಗಿರುವವರನ್ನು ಕೈಬಿಡುವ ಸಾಧ್ಯತೆ ಇದೆ. ಹೀಗಾಗಿ  ಹಿರಿಯ ಸಚಿವರಲ್ಲಿ ಆತಂಕವೂ ಕಾಣಿಸಿಕೊಂಡಿದೆ.