ತೈಲೆ ಬೆಲೆ ಏರಿಕೆಯಿಂದ ಕೆಂಗೆಟ್ಟ ಬಿಜೆಪಿ ಸರ್ಕಾರ: ಶಾಸಕರ ಭವನದ ಕಾರುಬಾರಿಗೆ ಬ್ರೇಕ್‌..?

Oct 11, 2021, 11:55 AM IST

ಬೆಂಗಳೂರು(ಅ.11): ನಿರಂತರ ತೈಲ ಬೆಲೆ ಏರಿಕೆಯಿಂದ ರಾಜ್ಯದ ಬಿಜೆಪಿ ಸರ್ಕಾರ ಕಂಗೆಟ್ಟಿದೆ. ಮಿತವ್ಯಯದತ್ತ ರಾಜ್ಯದ ಆರ್ಥಿಕ ಇಲಾಖೆಯ ಗಂಭೀರ ಚಿತ್ತ ನೆಟ್ಟಿದೆ. ಶಾಸಕರ ಭವನದ ಕಾರುಬಾರಿಗೆ ಸರ್ಕಾರ ಬ್ರೇಕ್‌ ಹಾಕಲಿದೆಯಾ?. ಶಾಸಕರು ಬಳಸುವ ಕಾರುಗಳಿಗೆ ಕಡಿವಾಣ ಹಾಕುವ ಲೆಕ್ಕಾಚಾರ ಇದಾಗಿದೆ. ಶಾಸಕರ ಹೆಸರಿನಲ್ಲಿ ದುರ್ಬಳಕೆ ಮಾಡದಂತೆ ತಡೆಯುವ ಪ್ಲ್ಯಾನ್‌ ಇದಾಗಿದೆ. ಎಂಎಲ್‌ಎ ಆಪ್ತರಿಂದಲೇ ಶಾಸಕರ ಭವನದ ಇನ್ನೋವಾ ಕಾರು ಬಳಕೆಯಾಗುತ್ತಿದೆಯಾ?. ಹೀಗಾಗಿ ಕಾರು ಬಳಸಿದ ಕೊನೆಯಲ್ಲಿ ಟ್ರಿಪ್‌ಶೀಟ್‌ಗೆ ಸಹಿ ಹಾಕೋದು ಕಡ್ಡಾಯವಾಗಿದೆ.