17ರ ಬಾಲಕಿಗೆ ಮದುವೆ ಮಾಡಿದ್ದಕ್ಕೆ ಹೈಕೋರ್ಟ್ ಗರಂ!

Published : Nov 28, 2024, 06:30 AM IST
17ರ ಬಾಲಕಿಗೆ ಮದುವೆ ಮಾಡಿದ್ದಕ್ಕೆ ಹೈಕೋರ್ಟ್ ಗರಂ!

ಸಾರಾಂಶ

ಅಪ್ರಾಪ್ತೆಯನ್ನು ಮದುವೆಯಾದ ಕಾರಣಕ್ಕೆ ಆಕೆಯ ಪತಿ ಹಾಗೂ ಪೋಷಕರ ವಿರುದ್ಧ ಪೋಕ್ಸೋ ಹಾಗೂ ಬಾಲ್ಯ ವಿವಾಹ ತಡೆ ಕಾಯ್ದೆ ಸೇರಿದಂತೆ ಮತ್ತಿತರ ಆರೋಪಗಳ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಲೂರಹಳ್ಳಿ ಠಾಣಾ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

ಬೆಂಗಳೂರು(ನ.28):  ಬಾಲ್ಯವಿವಾಹ ಮಾಡುವ ಪೋಷಕರ ವಿರುದ್ಧ ದಂಡನಾ ಕ್ರಮ ಜರುಗಿಸುವ ಮೂಲಕ ಅವರನ್ನು ಸಂವೇದನಶೀಲರನ್ನಾಗಿ ರೂಪಿಸುವ ಅಗತ್ಯವಿದ್ದು, ಪೋಷಕರ ನಡೆಯಿಂದ ಮಕ್ಕಳು ಪೋಕ್ಸೋ ಪ್ರಕರಣ ಎದುರಿಸುವಂತಾಗಿದೆ ಎಂದು ಹೈಕೋರ್ಟ್ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ, ಈ ಪ್ರಕರಣದಲ್ಲಿ ಮದುವೆ ಆದ ಅಪ್ರಾಪ್ತರ ಹೆಸರು ಕೈಬಿಟ್ಟರೂ ಪೋಷಕರನ್ನು ಬಿಡಲ್ಲ ಎಂದಿದೆ. 

ಅಪ್ರಾಪ್ತೆಯನ್ನು ಮದುವೆಯಾದ ಕಾರಣಕ್ಕೆ ಆಕೆಯ ಪತಿ ಹಾಗೂ ಪೋಷಕರ ವಿರುದ್ಧ ಪೋಕ್ಸೋ ಹಾಗೂ ಬಾಲ್ಯ ವಿವಾಹ ತಡೆ ಕಾಯ್ದೆ ಸೇರಿದಂತೆ ಮತ್ತಿತರ ಆರೋಪಗಳ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಲೂರಹಳ್ಳಿ ಠಾಣಾ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

ಪಾರ್ಕಲ್ಲಿ ಸಾಕುನಾಯಿ ಮಲ ಮಾಡಿದ್ರೆ ಮಾಲೀಕರಿಗೆ ದಂಡ!

ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆ ರದ್ದತಿಗೆ ಕೋರಿ ಸಂತ್ರಸ್ತೆಯ ಪತಿ ಮತ್ತು ಪೋಷಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬುಧವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, 18 ವರ್ಷ ತುಂಬುವ ಮುನ್ನವೇ ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಮದುವೆ ಮಾಡುವ ಪೋಷಕರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲೇಬಾರದು. ಆಗ ಮಾತ್ರ ಬಾಲ್ಯ ವಿವಾಹ ಪ್ರಕರಣಗಳು ನಿಲ್ಲುತ್ತವೆ ಎಂದು ಕಟುವಾಗಿ ನುಡಿದಿದೆ. ಅಂತಿಮವಾಗಿ ಅರ್ಜಿದಾರರ ಪರ ವಕೀಲರ ಮನವಿ ಮೇರೆಗೆ ಕೇವಲ ಸಂತ್ರಸ್ತೆಯ ಪತಿ ವಿರುದ್ದದ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಿದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಡಿ.4ಕ್ಕೆ ಮುಂದೂಡಿತು. 

ಇದಕ್ಕೂ ಮುನ್ನ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಇದು ಪೋಕ್ಸೋ ಪ್ರಕರಣವಾಗಿದೆ. ಮೊದಲ ಅರ್ಜಿದಾರ ಸಂತ್ರಸ್ತೆಯ ಗಂಡ. ಉಳಿದ ಮೂರು ಅರ್ಜಿದಾರರು ಸಂತ್ರಸ್ತೆಯ ಪೋಷಕರಾಗಿದ್ದಾರೆ. ಮದುವೆಯಾದಾಗ ಸಂತ್ರಸ್ತೆ ಸರ್ಕಾರಿ ಅಭಿಯೋಜಕರು ನೀಡಿದ ಮಾಹಿತಿಗೆ ಪ್ರತಿ ಕ್ರಿಯಿಸಿದ ನ್ಯಾಯಮೂರ್ತಿಗಳು ಮದುವೆಯಾಗಿ ಎರಡು ವರ್ಷದ ನಂತರ ಪ್ರಕರಣ ದಾಖಲಾಗಿದೆ. ಪೋಷಕರ ವಿರುದ್ಧವೂ ಪ್ರಕರಣ ದಾಖಲಿಸಿ ಪೊಲೀಸರು ಸರಿಯಾದ ಕ್ರಮ ಜರುಗಿಸಿದ್ದಾರೆ. 

ಪ್ರಕರಣದಲ್ಲಿ ಸಂತ್ರಸ್ತ ಮತ್ತು ಆಕೆಯ ಪತಿ ವಿರುದ್ದ ದೂರು ರದ್ದುಪಡಿಸಿದರೂ, ಪೋಷಕರನ್ನು ಮಾತ್ರ ಪ್ರಕರಣದಿಂದ ಕೈ ಬಿಡುವುದಿಲ್ಲ ಎಂದು ನುಡಿದರು. ಇದಕ್ಕೆ ಅರ್ಜಿದಾರರ ಪರ ವಕೀಲರು, ಪೋಷಕರು ಅನಕ್ಷರಸ್ಥರಾಗಿದ್ದಾರೆ. ಮಗಳು ವಯಸ್ಕಳಾಗಿದ್ದಾರೆ ಎಂದು ಭಾವಿಸಿ ಮದುವೆ ಮಾಡಿದ್ದಾರೆ. ಸಂತ್ರಸ್ತೆ ಸಹ 10ನೇ ತರಗತಿಯಲ್ಲೇ ಶಾಲೆಯನ್ನು ಬಿಟ್ಟಿದ್ದು, ವ್ಯಾಸಂಗ ಮುಂದುವರಿಸುತ್ತಿರಲಿಲ್ಲ. ಮೊದಲ ಅರ್ಜಿದಾರ ತನ್ನ ಅಕ್ಕನ ಮಗಳನ್ನೇ ಮದುವೆಯಾ ಆಪ್ರಾಪ್ತಿಯಾಗಿದ್ದರು. ಪ್ರಕರಣ ವರದಿಯಾದ ವೇಳೆ ಆಕೆಗೆ 17 ವರ್ಷ 4 ತಿಂಗಳಾಗಿತ್ತು. ಆದರೆ, ಅಧೀನ ನ್ಯಾಯಾಲಯದ ಮುಂದೆ ದಾಖಲಿಸಿದ ಸ್ವಯಿಚ್ಛೆ ಹೇಳಿಕೆಯಲ್ಲಿ ಮದುವೆಯಾದಾಗ ತನಗೆ 16 ವರ್ಷವಾಗಿತ್ತು ಎಂಬುದಾಗಿ ತಿಳಿಸಿದ್ದಾಳೆ. ಮದುವೆ ನಂತರ ಆಕೆಗೆ ಮಗು ಜನಿಸಿದೆ ಎಂದು ವಿವರಿಸಿದರು. 

ರೇಣುಕಾಸ್ವಾಮಿ ಕಿಡ್ನಾಪ್ ಆಗಿಯೇ ಇಲ್ಲ, ದರ್ಶನ್ ಕೃತ್ಯದಲ್ಲಿ ಭಾಗಿಯಾಗಿಲ್ಲ; ವಕೀಲ ಸಿ.ವಿ. ನಾಗೇಶ್ ವಾದ

ಇದೊಂದು ಬಾಲ್ಯವಿವಾಹ ಪ್ರಕರಣ ಎಂದು ಗಿರುವುದು ಎಂದು ಸಮಜಾಯಿಷಿ ನೀಡಿದರು. ಇದರಿಂದ ಆಘಾತ ವ್ಯಕ್ತಪಡಿಸಿದ ನ್ಯಾಯಪೀಠ, ಇದು ಕಟು ವಾಸ್ತವದ ಸಂಗತಿ. ಈ ಪರಿಸ್ಥಿತಿ ಬದಲಾಗಬೇಕಿದೆ. 18ಕ್ಕಿಂತ ಕಡಿಮೆ ವಯಸ್ಸಿನ ಮಕ್ಕ ಳಿಗೆ ಮದುವೆ ಮಾಡಬಾರದು ಎನ್ನುವುದನ್ನು ಪೋಷ ಕರು ತಿಳಿಯಬೇಕು. ಇಡೀ ಪ್ರಕರಣಕ್ಕೆ ಪೋಷಕರೇ ಜವಾಬ್ದಾರಿ ಎಂದು ಖಾರವಾಗಿ ಹೇಳಿತು. 

ಅಲ್ಲದೆ, 18 ವರ್ಷ ತುಂಬುವ ಮುನ್ನವೇ ಅಪ್ರಾಪ್ತ ಮಕ್ಕಳನ್ನು ಮದುವೆಯಾಗುವಂತೆ ಪೋಷಕರು ಏಕೆ ಬಲವಂತ ಮಾಡಬೇಕು. ಅಂತಹ ಪೋಷಕರನ್ನು ಸಹಿಸಲು ಸಾಧ್ಯವೇ ಇಲ್ಲ. ದಂಡನಾ ಕ್ರಮ ಜರುಗಿಸಿ ಪೋಷಕರನ್ನು ಸಂವೇದನಶೀಲರಾಗಿ ಮಾಡಲು ಇದು ಸಕಾಲ. ಇಲ್ಲವಾದರೆ ಪೋಷಕರು ಮಕ್ಕಳಿಗೆ ಬಾಲ್ಯ ವಿವಾಹ ಮಾಡುವುದು ನಿಲ್ಲಿಸುವುದಿಲ್ಲ. ಹಾಗಾಗಿ, ದಂಪತಿ ವಿರುದ್ಧ ಪ್ರಕರಣ ರದ್ದುಪಡಿಸೋಣ. ಪೋಷಕರು ಮಾತ್ರ ಬಾಲ್ಯ ವಿವಾಹ ತಡೆ ಕಾಯ್ದೆಯಡಿ ನ್ಯಾಯಾಲಯದ ವಿಚಾರಣೆ ಎದುರಿಸಲಿ. ಒಂದೆರಡು ಕ್ರಮ ಜರುಗಿಸಿದರೆ ಬಾಲ್ಯ ವಿವಾಹ ಮಾಡಬಾರದು ಎಂಬುದಾಗಿ ಪೋಷಕರಿಗೆ ಜ್ಞಾನೋದಯವಾಗುತ್ತದೆ ಎಂದು ಹೇಳಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್
ಮಹಿಳಾ ನೌಕರರಿಗೆ ಬ್ಯಾಡ್ ನ್ಯೂಸ್: ಮುಟ್ಟಿನ ರಜೆಗೆ ಹೈಕೋರ್ಟ್ ತಡೆ: ಸರ್ಕಾರದ ಆದೇಶಕ್ಕೆ ಹಿನ್ನಡೆ?