ಕೊಟ್ಟ ಜವಾಬ್ದಾರಿ ನಿರ್ವಹಿಸಿಲ್ಲ; ಕುರ್ಚಿ ಉಳಿಸಿಕೊಳ್ಳಲು ಸವದಿ ಸರ್ಕಸ್

Jul 28, 2020, 6:19 PM IST

ಬೆಂಗಳೂರು (ಜು. 28):  ಕೊಟ್ಟ ಕೆಲಸವನ್ನು ಸಮರ್ಥವಾಗಿ ನಿಭಾಯಿಸದೇ ಕುರ್ಚಿ ಉಳಿಸಿಕೊಳ್ಳಲು ಡಿಸಿಎಂ ಲಕ್ಷ್ಮಣ್ ಸವದಿ ಕಸರತ್ತು ನಡೆಸುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿಲ್ಲ. ಇವರ ವಿರುದ್ಧ ಹೈಕಮಾಂಡ್‌ಗೆ ಹಲವರು ದೂರು ನೀಡಿದ್ದರು. ರಾಜ್ಯಪಾಲರ ಮೂಲಕ ಲಕ್ಷ್ಮಣ ಸವದಿಯನ್ನು ಎಚ್ಚರಿಸಿದ್ದರು ಹೈ ಕಮಾಂಡ್. ಕೂಡಲೇ ಸವದಿಯರು ಅಲರ್ಟ್ ಆಗಿದ್ದು ದಿಢೀರನೇ ದೆಹಲಿಗೆ ದೌಡಾಯಿಸಿದ್ಧಾರೆ. ಹೈಕಮಾಂಡ್‌ಗೆ ಕೆಲಸದ ವರದಿ ಸಲ್ಲಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ,..!