ಸಿಗರೇಟ್‌ಗೆ ಕೊಟ್ಟ ದುಡ್ಡು ಕಮ್ಮಿ ಇದೆ ಎಂದಿದ್ದಕ್ಕೆ ಟೀ ಶಾಪ್ ಯುವಕನಿಗೆ ಹಲ್ಲೆ ನಡೆಸಿದ ಪುಂಡರು!

Published : Apr 28, 2024, 12:38 AM ISTUpdated : Apr 28, 2024, 12:39 AM IST
 ಸಿಗರೇಟ್‌ಗೆ ಕೊಟ್ಟ ದುಡ್ಡು ಕಮ್ಮಿ ಇದೆ ಎಂದಿದ್ದಕ್ಕೆ ಟೀ ಶಾಪ್ ಯುವಕನಿಗೆ ಹಲ್ಲೆ ನಡೆಸಿದ ಪುಂಡರು!

ಸಾರಾಂಶ

ಕ್ಷುಲ್ಲಕ ಕಾರಣ ಬಡಪಾಯಿ ಟೀ ಶಾಪ್ ಯುವಕನ ಮೇಲೆ ಪುಂಡರು ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪುಂಡರಿಂದ ಹಲ್ಲೆಗೊಳಗಾದ ಯುವಕ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. 

ಬೆಂಗಳೂರು (ಏ.28): ಕ್ಷುಲ್ಲಕ ಕಾರಣ ಬಡಪಾಯಿ ಟೀ ಶಾಪ್ ಯುವಕನ ಮೇಲೆ ಪುಂಡರು ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪುಂಡರಿಂದ ಹಲ್ಲೆಗೊಳಗಾದ ಯುವಕ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. 
 
ಕುಡಿದ ಮತ್ತಿನಲ್ಲಿ ಟೀ ಶಾಪ್‌ಗೆ ಬಂದಿದ್ದ ಆರೋಪಿ. ಟೀ ಕುಡಿದು ಸಿಗರೇಟ್ ಸೇದಿದ ಬಳಿಕ ದುಡ್ಡು ಕಮ್ಮಿ ಕೊಟ್ಟಿದ್ದಾನೆ. ಇದರಿಂದ ಟೀ ಶಾಪ್ ಯುವಕ. ಕೊಟ್ಟಿರುವ ದುಡ್ಡು ಕಮ್ಮಿ ಇದೆ ಎಂದಿದ್ದಾನೆ. ಇದೇ ಕಾರಣಕ್ಕೆ ಮಾತಿನ ಪುಂಡರು ಮಾತಿನ ಚಕಮಕಿ ನಡೆಸಿದ್ದಾರೆ. ಈ ವೇಳೆ ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಕೈಯಲ್ಲಿದ್ದ ಬಿಯರ್ ಬಾಟಲಿಯಿಂದ ಯುವಕನ ಮೇಲೆ ಹಲ್ಲೆ ನಡೆಸಿರುವ ಪುಂಡರು. ಹಲ್ಲೆಗೊಳಗಾದ ಯುವಕ ಆಸ್ಪತ್ರೆಗೆ ದಾಖಲಾದರೂ ಆಸ್ಪತ್ರೆಗೆ ಹೋಗಿ ಧಮ್ಕಿ ಹಾಕಿರುವ ಪುಂಡರು. ಹಲ್ಲೆ ವೇಳೆ ತಡೆಯಲು ಬಂದ ಸ್ಥಳೀಯ ಯುವಕನ ಮೇಲೂ ಹಲ್ಲೆ ನಡೆಸಿದ್ದಾರೆ. ಸದ್ಯ ಹಲ್ಲೆ ಘಟನೆ ಸಂಬಂಧ ದೂರು ದಾಖಲಿಕೊಂಡ ಪೊಲೀಸರು. ವಿಚಾರಣೆಗೆ ಮುಂದಾಗಿದ್ದಾರೆ.

ಬೆಂಗಳೂರಲ್ಲಿ ಪಾನಿಪೂರಿ ಕೊಡಿಸ್ತೇನೆಂದು 7 ವರ್ಷದ ಮಗು ಕರೆದೊಯ್ದು ಅತ್ಯಾಚಾರ

ಈ ಹಿಂದೆ ನಗರದಲ್ಲಿ ರೌಡಿಸಂ, ಹಲ್ಲೆ ದರೋಡೆಕೋರರನ್ನು ಮಟ್ಟಹಾಕುತ್ತೇವೆ ಎಂದು ಅಬ್ಬರಿಸಿ ಬೊಬ್ಬಿರಿದಿದ್ದ ಬೆಂಗಳೂರು ಪೊಲೀಸರು. ಕೇವಲ ಮಾತಿಗೆ ಮಾತ್ರ ಸೀಮಿತವಾಯಿತಾ? ದಿನನಿತ್ಯ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಪುಂಡರು ಹಾವಳಿ ಮಿತಿಮೀರಿದ ಸಾರ್ವಜನಿಕರು, ವ್ಯಾಪಾರಿಗಳ ಮೇಲೆ ಹಲ್ಲೆಯಂತಹ ಪ್ರಕರಣಗಳು ದಿನನಿತ್ಯ ನಡೆಯುತ್ತಿದ್ದರೂ ಪುಂಡರ ಹಾವಳಿಯನ್ನು ನಿಯಂತ್ರಣ ಮಾಡುವಲ್ಲಿ ಪೊಲೀಸರು ವಿಫಲರಾಗಿದ್ದಾರಾ ಎಂಬ ಅನುಮಾನ ಮೂಡಿಸುವಂತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು