May 25, 2021, 4:16 PM IST
ಬೆಂಗಳೂರು (ಮೇ. 25): ವಾತಾವರಣದಲ್ಲಿರುವ ವೈರಸ್ ಹೋಗಲಾಡಿಸಲು ಬೆಳಗಾವಿ ಶಾಸಕ ಅಭಯ್ ಪಾಟೀಲ್ ಹೋಮ ಹವನ ಮಾಡಿಸಿದ್ಧಾರೆ. ' ಪೂಜೆ ಮನೆಯಲ್ಲೇ ಮಾಡಿಕೊಂಡರೆ ಒಳ್ಳೆಯದು' ಎಂದು ಶಾಸಕ ಅಭಯ್ ಪಾಟೀಲ್ ವಿರುದ್ಧ ಡಿಸಿಎಂ ಅಶ್ವಥ್ ನಾರಾಯಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊರೊನಾ ಹೋಗಲಾಡಿಸಲು ಹೋಮ- ಹವನ: ಇವೆಲ್ಲಾ ಮೂಢನಂಬಿಕೆ ಅಂತಾರೆ ವಿಜ್ಞಾನ ಲೇಖಕ ನಾಗೇಶ್ ಹೆಗಡೆ
'ಈ ರೀತಿ ಹೋಮ ಹವನ ಮಾಡಿ ಜನ ಸೇರಿಸುವುದು ಸರಿಯಲ್ಲ. ನಿಮ್ಮ ಮನೆಗಳಲ್ಲಿ ಹೋಮ- ಹವನ ಮಾಡಿಕೊಳ್ಳಿ. ಈ ರೀತಿ ಮಾಡುವುದು ಸರಿಯಲ್ಲ' ಎಂದು ಅಶ್ವಥ್ ನಾರಾಯಣ್ ಹೇಳಿದ್ಧಾರೆ.