District In-charge: ಬೆಳಗಾವಿಯಲ್ಲಿ ಜಾರಕಿಹೊಳಿ ರೋಚಕ ಪಾಲಿಟಿಕ್ಸ್, ಹಠ ಸಾಧಿಸಿಯೇ ಬಿಟ್ರಾ.?

Jan 25, 2022, 10:11 AM IST

ಬೆಂಗಳೂರು (ಜ. 25): ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದ ಸರ್ಕಾರ ಅಸ್ತಿತಕ್ಕೆ ಬಂದು ಆರು ತಿಂಗಳು ಸಮೀಪಿಸುತ್ತಿರುವ ವೇಳೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಆದೇಶ ಹೊರಬಿದ್ದಿದ್ದು, ಎಲ್ಲ ಸಚಿವರಿಗೂ ತವರು ಜಿಲ್ಲೆ ಹೊರತುಪಡಿಸಿ ಬೇರೆ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ.

ಎಲ್ಲ ಸಚಿವರಿಗೂ ತಮ್ಮ ತವರು ಜಿಲ್ಲೆಯನ್ನು ಹೊರತುಪಡಿಸಿ ಬೇರೆ ಜಿಲ್ಲೆಗಳ ಜವಾಬ್ದಾರಿ ನೀಡಿರುವುದು ಈ ಬಾರಿಯ ವಿಶೇಷ. ಇದನ್ನು ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಸರ್ಕಾರದಲ್ಲೇ ಜಾರಿಗೆ ತರಲು ನಿರ್ಧರಿಸಲಾಗಿತ್ತು. ತವರು ಜಿಲ್ಲೆಯ ಉಸ್ತುವಾರಿ ಹೊಂದಿದವರು ತಮ್ಮ ಆಪ್ತರಿಗೆ ಅಥವಾ ತಮ್ಮ ಬೆಂಬಲಿಗರಿಗೆ ಮಾತ್ರ ಆದ್ಯತೆ ನೀಡುತ್ತಾರೆ ಎಂಬ ಹಿನ್ನೆಲೆಯಲ್ಲಿ ಬದಲಿ ಜಿಲ್ಲೆಯ ಉಸ್ತುವಾರಿ ನೀಡಲು ಆಗ ನಡೆದಿದ್ದ ಕೋರ್‌ ಕಮಿಟಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಅದು ಈಗ ಅನುಷ್ಠಾನಕ್ಕೆ ಬಂದಿದೆ.

ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ VS ಉಮೇಶ್ ಕತ್ತಿ ನಡುವೆ ಫೈಟ್ ನಡೆದಿದೆ. ನನ್ನನ್ನು ಬಿಟ್ರೆ ಬೆಳಗಾವಿ ಉಸ್ತುವಾರಿ ನಮ್ಮ ಜಿಲ್ಲೆಯವರಿಗೆ ಯಾರಿಗೂ ಸಿಗಬಾರದು ಎಂದು ಜಾರಕಿಹೊಳಿ ಪಟ್ಟು ಹಿಡಿದಿದ್ರು. ಸ್ವಂತ ಜಿಲ್ಲೆಯವರಿಗೆ ಕೊಡದೇ ಬೇರೆಯವರಿಗೆ ಕೊಟ್ಟಿದ್ದರಿಂದ ಜಾರಕಿಹೊಳಿ ಹಠ ಸಾಧಿಸಿದಂತಾಗಿದೆ.