ಮೃತಪಟ್ಟು 3 ದಿನಗಳಾದ್ರೂ ಅಂತ್ಯಸಂಸ್ಕಾರವಿಲ್ಲ, ಇಂದೂ ಸಾಧ್ಯವಿಲ್ಲ ಎಂದ ಸಿಬ್ಬಂದಿ

Apr 27, 2021, 4:26 PM IST

ಬೆಂಗಳೂರು (ಏ. 27): ಆಂಬುಲೆನ್ಸ್‌ನಲ್ಲಿ ಕಳೆದ 3 ದಿನಗಳಿಂದ ಸೋಂಕಿತನ ಮೃತದೇಹವಿದ್ದು, ಸಂಬಂಧಿಕರು ಸ್ಮಶಾನದಿಂದ ಸ್ಮಶಾನಕ್ಕೆ ಅಲೆಯುತ್ತಿದ್ದಾರೆ. ಇಂದಿರಾನಗರ ಆಸ್ಪತ್ರೆಯಲ್ಲಿ 55 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಪಣತ್ತೂರು ಚಿತಾಗಾರಕ್ಕೆ ತೆಗೆದುಕೊಂಡು ಬಂದರೆ, ಅಂತ್ಯಕ್ರಿಯೆಗೆ ಸಿಬ್ಬಂದಿ ಒಪ್ಪಲಿಲ್ಲ. ಇಂದೂ ಕೂಡಾ ಸಾಧ್ಯವಿಲ್ಲ ಎಂದಿದ್ದಾರೆ. ಸಾವಿನ ಪ್ರಮಾಣ ಹೆಚ್ಚಳವಾಗುತ್ತಿರುವುದರಿಂದ ಅದೇ ದಿನವೇ ಅಂತ್ಯಕ್ರಿಯೆ ಮಾಡಲು ಸಾಧ್ಯವಿಲ್ಲ ಎಂದು ಸಿಬ್ಬಂದಿಗಳು ಹೇಳುತ್ತಾರೆ. 
ಜನತಾ ಕರ್ಫ್ಯೂ ಮಧ್ಯೆಯೂ ಮದ್ಯಪ್ರಿಯರಿಗೆ ನೋ ಟೆನ್ಷನ್..!