25 ಕೋಟಿ ರೂ ವಂಚನೆ ಯತ್ನ: ದರ್ಶನ್ ಸ್ನೇಹಿತರ ನಡುವೆಯೇ ಗೊಂದಲದ ಹೇಳಿಕೆ

Jul 12, 2021, 11:31 AM IST

ಬೆಂಗಳೂರು (ಜು. 12): ಹೆಸರಲ್ಲಿ 25 ಕೋಟಿ ರೂ ವಂಚನೆ ಯತ್ನ ಕೇಸ್‌ನಲ್ಲಿ ದರ್ಶನ್ ಸ್ನೇಹಿತರಲ್ಲೇ ಗೊಂದಲವಿದೆ. ಹರ್ಷಗೆ ಅರುಣಾ ಕುಮಾರಿ ಗೊತ್ತಿತ್ತು ಎಂದು ಉಮಾಪತಿ ಹೇಳಿದರೆ, ಅರುಣಾ ಕುಮಾರಿ ಬಗ್ಗೆ ಹೇಳಿದ್ದೇ ಉಮಾಪತಿ ಎಂದು ಹರ್ಷ ಹೇಳಿದ್ಧಾರೆ. 

ದರ್ಶನ್ ಹೆಸರಲ್ಲಿ 25 ಕೋಟಿ ವಂಚನೆ ಕೇಸ್‌ಗೆ ಟ್ವಿಸ್ಟ್; ವಂಚಕಿ ಅರುಣಾ ಕುಮಾರಿ ರಿಲೀಸ್

'ಜೂ.16 ರಂದು ನಿರ್ಮಾಪಕ ಉಮಾಪತಿ ಕರೆ ಮಾಡಿ, ಕೆನರಾ ಬ್ಯಾಂಕಿನ ಮ್ಯಾನೇಜರ್‌ ಅರುಣಕುಮಾರಿ ನನಗೆ ಸಿಕ್ಕಿದ್ದು, ನೀನು .25 ಕೋಟಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದೀಯಾ? ಅದರ ಭದ್ರತೆಗಾಗಿ ನಿನ್ನ ಆಸ್ತಿ ಮತ್ತು ದರ್ಶನ್‌ ಆಸ್ತಿ ಪತ್ರಗಳನ್ನು ನಕಲು ಮಾಡಿ ಸಲ್ಲಿಸಿದ್ದೀಯಾ 'ಎಂದು ಕೇಳಿದ್ದಾರೆಂದು ಹರ್ಷ ಹೇಳಿದ್ಧಾರೆ.