Siddaramaiah: ಬರ ಪರಿಹಾರದ ಮೊದಲ ಕಂತಿನ ಹಣ ವಾರದೊಳಗೆ ರೈತರಿಗೆ ತಲುಪಲಿದೆ: ಸಿಎಂ ಘೋಷಣೆ

Jan 26, 2024, 11:49 AM IST

ಮಾಣಿಕ್ ಷಾ ಮೈದಾನದಲ್ಲಿ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawarchand Gehlot)ಧ್ವಜಾರೋಹಣ ನೆರವೇರಿಸಿದರು. ತೆರದ ಜೀಪ್‌ನಲ್ಲಿ ಗೌರವ ರಕ್ಷೆಯನ್ನು ರಾಜ್ಯಪಾಲರು ಸ್ವೀಕರಿಸಿದರು. ಇನ್ನೂ ಗಣರಾಜ್ಯೋತ್ಸವದ(Republic Day) ಸಂದೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ( CM Siddaramaiah), ಈ ವಾರ ಬೆಳೆ ಪರಿಹಾರದ(Crop relief Fund) ಮೊದಲ ಕಂತು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ವಾರದೊಳಗೆ ಮೊದಲ ಕಂತಿನ ಹಣ ರೈತರಿಗೆ ತಲುಪಲಿದೆ. ಎರಡು ಸಾವಿರ ಬೆಳೆ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿತ್ತು. ಈವರೆಗೆ 550 ಕೋಟಿ ರೂಪಾಯಿ ರೈತರ ಖಾತೆಗೆ ಜಮೆ ಆಗಿದೆ ಎಂದು ಸಿಎಂ ಹೇಳಿದರು.

ಇದನ್ನೂ ವೀಕ್ಷಿಸಿ:  Chakravarthy Sulibele: ಈ ವರ್ಷ ಗಣರಾಜ್ಯೋತ್ಸವದಲ್ಲಿ ನಾರಿ ಶಕ್ತಿ ಪ್ರದರ್ಶನ: ಈ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು ?