Aug 4, 2020, 11:26 AM IST
ಬೆಂಗಳೂರು (ಆ. 04): ಪ್ರಧಾನಿ ನರೇಂದ್ರ ಮೋದಿ ನಾಳೆ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಸಕಲ ಸಿದ್ಧತೆಗಳು ನಡೆಯುತ್ತಿದ್ದರೆ ಇನ್ನೊಂದು ಕಡೆ ಯಾವುದೇ ದುಷ್ಕೃತ್ಯಗಳು ನಡೆಯಬಾರದೆಂದು ಅಯೋಧ್ಯೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗಲಭೆಕೋರರ ಬಗ್ಗೆ ಮಾಹಿತಿ ಪಡೆದಿದ್ದಾರೆ. ಮತೀಯ ಸಂಘಟನೆಗಳ ಬಗ್ಗೆ ಕಣ್ಣಿಡಲಾಗಿದೆ. ರಾಜ್ಯದಲ್ಲಿಯೂ ವಿವಿಧ ವಲಯಗಳ ಐಜಿಪಿಗಳು, ಪೊಲೀಸ್ ಕಮಿಷನರ್ಗಳು, ಮತ್ತು ಎಸ್ಪಿಗಳ ಜೊತೆ ಸಭೆ ನಡೆಸಲಾಗಿದ್ದು ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!
ರಾಮ ಮಂದಿರ ಭೂಮಿ ಪೂಜೆ: ಮೊದಲ ಆಮಂತ್ರಣ ಪತ್ರಿಕೆ ಹೋಗಿದ್ದು ಮುಸ್ಲಿಂ ವ್ಯಕ್ತಿಗೆ