ರಾಮ ಮಂದಿರ ಭೂಮಿ ಪೂಜೆ: ಮೊದಲ ಆಮಂತ್ರಣ ಪತ್ರಿಕೆ ಹೋಗಿದ್ದು ಮುಸ್ಲಿಂ ವ್ಯಕ್ತಿಗೆ
ರಾಮ ಮಂದಿರ ಭೂಮಿ ಪೂಜೆಯ ಆಮಂತ್ರಣ ಪತ್ರಿಕೆಯ ಮೊದಲ ಪ್ರತಿಯನ್ನು ಅಯೋಧ್ಯೆ ಪ್ರಕರಣದ ಮುಸ್ಲಿಂ ದಾವೆದಾರರಾಗಿದ್ದ ಇಕ್ಬಾಲ್ ಅನ್ಸಾರಿ ಅವರಿಗೆ ನೀಡಿರುವುದು ಗಮನ ಸೆಳೆದಿದೆ.
ಅಯೋಧ್ಯೆ, (ಆ.03): ಆ.5ರಂದು ನೆರವೇರಲಿರುವ ರಾಮ ಮಂದಿರ ಭೂಮಿ ಪೂಜೆಗಾಗಿ ಅಯೋಧ್ಯೆ ವಧುವಿನಂತೆ ಸಜ್ಜಾಗುತ್ತಿದೆ.
ರಾಮ ಮಂದಿರ ಭೂಮಿ ಪೂಜೆ ಆಮಂತ್ರಣ ಪತ್ರಿಕೆ ವೈರಲ್: ಮೋದಿ ಜೊತೆ ಮೂವರ ಹೆಸರು!
ಅದರಂತೆ ಭೂಮಿ ಪೂಜೆಗೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಆಮಂತ್ರಣ ಪತ್ರಿಕೆಯನ್ನು ಪ್ರಕಟಿಸಿದ್ದು, ಕೇಸರಿ ಬಣ್ಣದಲ್ಲಿರುವ ಈ ಆಮಂತ್ರಣ ಪತ್ರಿಕೆಯಲ್ಲಿ ಪ್ರಧಾನಿ ಮೋದಿ ಸೇರಿ ನಾಲ್ವರು ಗಣ್ಯರ ಹೆಸರಿದೆ. ಆದ್ರೆ, ಆಮಂತ್ರಣ ಪತ್ರಿಕೆಯ ಮೊದಲ ಪ್ರತಿಯನ್ನು ಅಯೋಧ್ಯೆ ಪ್ರಕರಣದ ಮುಸ್ಲಿಂ ದಾವೆದಾರರಾಗಿದ್ದ ಇಕ್ಬಾಲ್ ಅನ್ಸಾರಿ ಅವರಿಗೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.