ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಮುಸ್ಲಿಂ ಮುಖಂಡರಿಂದ ಅಭಿಯಾನ

Nov 21, 2020, 1:56 PM IST

ಬೆಂಗಳೂರು (ನ. 21): ದೇಶದ ವಿವಿಧ ಭಾಗಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಬಗ್ಗೆ ಚರ್ಚೆಯಾಗುತ್ತಿದೆ. ಕರ್ನಾಟಕದಲ್ಲಿಯೂ ನಿಷೇಧ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತಿದೆ.  ಗೋ ಹತ್ಯೆ ನಿಷೇಧದ ಬಗ್ಗೆ ಮುಸಲ್ಮಾನರು ಕೂಡಾ ದನಿ ಎತ್ತಿದ್ದಾರೆ. ಗೋ ಹತ್ಯೆ ನಿಷೇಧ ಮಾಡಿ ಎಂಬ ಅಭಿಯಾನವನ್ನೂ ಶುರು ಮಾಡಿದ್ದಾರೆ. 

ಮತ್ತೆ ಕೊರೊನಾ ಆರ್ಭಟ ಶುರು, ವೀಕೆಂಡ್ ಕರ್ಫ್ಯೂ ಜಾರಿ; ಮತ್ತೆ ಲಾಕ್‌ಡೌನ್ ಸಾಧ್ಯತೆ?

ಈ ಬಗ್ಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದ್ದಾರೆ. 'ಗೋಹತ್ಯೆ ನಿಷೇಧ ಕಾನೂನಿಗೆ ಮುಸಲ್ಮಾನರು ಬೆಂಬಲ ನೀಡುತ್ತಿರುವುದು ಸ್ವಾಗತಾರ್ಹ. ಸರ್ಕಾರ ಇದನ್ನು ಗಂಭೀರವಗಾಇ ಪರಿಗಣಿಸಿ, ಕಾನೂನನ್ನು ಜಾರಿಗೊಳಿಸಬೇಕು. ಗೋ ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಚಕ್ರವರ್ತಿ ಸೂಲಿಬೆಲೆ ಮಾತನಾಡಿದ್ದಾರೆ.