ಬೆಂಗಳೂರು ಗಲಭೆ:ಉದ್ರಿಕ್ತ ಗುಂಪಿನಿಂದ ಸುವರ್ಣ ನ್ಯೂಸ್ ವರದಿಗಾರರ ಮೇಲೆ ಹಲ್ಲೆ

Aug 12, 2020, 11:15 AM IST

ಬೆಂಗಳೂರು (ಆ. 12): ಇಸ್ಲಾಂ ಧರ್ಮ ಗುರು ಮಹಮ್ಮದ್ ಪೈಗಂಬರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಲಾಗಿದೆ ಎಂದು ಉದ್ರಿಕ್ತ ಗುಂಪೊಂದು ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಪೊಲೀಸ್‌ ಠಾಣೆ ಮೇಲೆ ದಾಳಿ ನಡೆಸಿದೆ. 

ಈ ಗಲಭೆಯ ವರದಿಗೆ ತೆರಳಿದ್ದ ಸುವರ್ಣ ನ್ಯೂಸ್ ತಂಡದ ಮೇಲೆಯೂ ದಾಳಿ ನಡೆದಿದೆ. ವರದಿಗಾರರಾದ ಪ್ರದೀಪ್, ರವಿ, ಕ್ಯಾಮೆರಾ ಮ್ಯಾನ್ ರುದ್ರೇಶ್ ಮೇಲೆ ಹಲ್ಲೆಯಾಗಿದೆ. ಪ್ರದೀಪ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರವಿ ಕಾರು ಜಖಂ ಆಗಿದೆ.  ಘಟನೆಯಲ್ಲಿ ನಡೆದಿದ್ದೇನು? ಎಂದು ವರದಿಗಾರ ರವಿ ವಿವರಿಸಿದ್ದಾರೆ. ಇಲ್ಲಿದೆ ನೋಡಿ..!

ಬೆಂಗಳೂರು ಗಲಭೆ: ಸುವರ್ಣ ನ್ಯೂಸ್ ಪ್ರತಿನಿಧಿ ಮೇಲೆ ಹಲ್ಲೆ, ಕಾರು ಜಖಂ, ಕ್ಯಾಮೆರಾ ಪುಡಿಪುಡಿ