Jun 9, 2020, 7:42 PM IST
ಬೆಂಗಳೂರಿನಲ್ಲಿ ಕೆಲವೊಂದು ಕಾಫಿ ಶಾಪ್ಗಳು, ಹೊಟೇಲ್ಗಳು, ಫಲಾಹಾರ ಮಂದಿರಗಳ ಇಡ್ಲಿ, ದೋಸೆಯನ್ನು ಸವಿಯಬೇಕು ಎಂಬ ಮಾತಿದೆ. ಉದಾಹರಣೆಗೆ ವಿದ್ಯಾರ್ಥಿ ಭವನದ ದೋಸೆ, ಬೈಟು ಕಾಫಿಯಲ್ಲಿ ಕಾಫಿ, ಮಯ್ಯಾಸ್ನಲ್ಲಿ ಇಡ್ಲಿ, ಎಂಟಿಆರ್ನಲ್ಲಿ ಕಾಫಿ ಹೀಗೆ. ಅದರಲ್ಲಿ ಬಸವನಗುಡಿಯ ರಂಗರಾವ್ ರಸ್ತೆ ಬ್ರಾಹ್ಮಣರ ಫಲಹಾರ ಮಂದಿರ ಕೂಡಾ. ಬಸವನಗುಡಿ ಕಡೆ ಹೋದರೆ ಒಮ್ಮೆಯಾದರೂ ಈ ಫಲಾಹಾರ ಮಂದಿರಕ್ಕೆ ಭೇಟಿ ಕೊಟ್ಟು ಇಲ್ಲಿನ ತಿಂಡಿಯನ್ನು ಟೇಸ್ಟ್ ಮಾಡಬೇಕು ಎಂಬುದು ತಿಂಡಿ ಪ್ರಿಯರ ಮಾತು. ಇದು ಅನೇಕ ವಿದ್ವಾಂಸರ, ಸಾಹಿತಿಗಳ ಚರ್ಚಾ ಸ್ಥಳವೂ ಹೌದು. ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಇಂದು ಇಲ್ಲಿಗೆ ಭೇಟಿ ನೀಡಿ ರುಚಿ ರುಚಿಯಾದ ತಿಂಡಿಯನ್ನು ಸವಿದರು.