ಗೊಂದಲ ಸೃಷ್ಟಿಸಿದ ಸೋಂಕಿತನ ವಿಳಾಸ; ವಾರಿಯರ್ ಬೇಕರಿ ಮಾಲಿಕರ ಸ್ಪಷ್ಟನೆ

Jun 26, 2020, 11:51 AM IST

ಬೆಂಗಳೂರು (ಜೂ. 26):  ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಮಹಾಮಾರಿ ಹೆಚ್ಚಾಗುತ್ತಿದ್ದು ಆತಂಕವನ್ನು ಹೆಚ್ಚಿಸಿದೆ. ರಾಜಾಜಿನಗರದ ವಾರಿಯರ್ ಬೇಕರಿಯ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿತ್ತು. ಈ ಬಗ್ಗೆ ಬೇಕರಿ ಮಾಲಿಕರು ಸುವರ್ಣ ನ್ಯೂಸ್‌ಗೆ ಸ್ಪಷ್ಟನೆ ನೀಡಿದ್ದಾರೆ. 

ರಾಜಧಾನಿಯಲ್ಲಿ ಹೆಚ್ಚಾಗುತ್ತಿದೆ ಕೋವಿಡ್ 19: ಕುತೂಹಲ ಮೂಡಿಸಿದೆ ಸಿಎಂ ನಿರ್ಧಾರ

SRF ಅರ್ಜಿಯಲ್ಲಿ ಸೋಂಕಿತ ವ್ಯಕ್ತಿ ವಾರಿಯರ್ ಬೇಕರಿ ವಿಳಾಸ ನೀಡಿದ್ದಾನೆ. ಆದರೆ ಮಾಲೀಕರ ಪ್ರಕಾರ ಆ ಹೆಸರಿನ ವ್ಯಕ್ತಿ ಬೇಕರಿಯಲ್ಲಿ ಕೆಲಸ ಮಾಡುತ್ತಿಲ್ಲ.  ಹಿಂದೆ ಕೆಲಸ ಮಾಡುತ್ತಿದ್ದ ಬಗ್ಗೆಯೂ ಮಾಹಿತಿ ಇಲ್ಲ ಎಂದಿದ್ದಾರೆ.  

ನಮ್ಮ ಬೇಕರಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸೋಂಕು ದೃಢಪಟ್ಟಿಲ್ಲ. ನಮ್ಮ ಬೇಕರಿ ವಿಳಾಸ ಬರೆದು ಗೊಂದಲ ಸೃಷ್ಟಿ ಮಾಡಿರಬಹುದು. ಆದರೆ ನಮ್ಮ‌ ಸಿಬ್ಬಂದಿ ಯಾರಿಗೂ ಸೋಂಕು ತಗುಲಿಲ್ಲ ಗ್ರಾಹಕರು ಭಯಪಡಬೇಕಾದ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.