'ಕೋರ್ಟ್‌ಗೆ ಹೋಗೋದು ನಮ್ಮ ಹಕ್ಕು ರೀ, ಇದನ್ನ ಪ್ರಶ್ನಿಸೋದಕ್ಕೆ ಕಾಂಗ್ರೆಸ್‌ನವರು ಯಾರ್ರಿ.?'

Mar 22, 2021, 5:36 PM IST

ಬೆಂಗಳೂರು (ಮಾ. 22): ಕೋರ್ಟ್‌ನಿಂದ 6 ಸಚಿವರು ತಡೆ ತಂದ ವಿಚಾರಕ್ಕೆ ಕಾಂಗ್ರೆಸ್ ಟೀಕೆಗೆ ಸಚಿವ ಬಿಸಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. 'ನಮ್ಮ ಹಕ್ಕನ್ನ ಪ್ರಶ್ನಿಸೋದಕ್ಕೆ ಅವರು ಯಾರು.? ನಾವು ಕೋರ್ಟ್‌ಗೆ ಹೋಗುವುದಕ್ಕೂ, ಅವರಿಗೂ ಏನು ಸಂಬಂಧ..? ನಮ್ಮ ನಿರ್ಧಾರ ಪ್ರಶ್ನಿಸೋ ಹಕ್ಕು ಅವರಿಗೇನಿದೆ..? ಕಾಂಗ್ರೆಸ್ಸಿಗರು ಇಷ್ಟು ಹೀನಾಯ ಸ್ಥಿತಿಗೆ ಹೋಗ್ತಾರೆ ಅಂದುಕೊಂಡಿರಲಿಲ್ಲ' ಎಂದಿದ್ದಾರೆ. 

ವಿಡಿಯೋ ಕಾಲ್‌ನಲ್ಲಿ ಉತ್ತರ ಕರ್ನಾಟಕದ ಮಾಜಿ ಶಾಸಕರ ಪುತ್ರ ಬೆತ್ತಲೆ.. ಹನಿಟ್ರ್ಯಾಪ್ ಜಾಲ!

'ಅವರ ಸರ್ಕಾರವನ್ನು ಕೆಳಗಿಳಿಸಿದ್ದೇವೆ ಅಂತ ನಮ್ಮ ಮೇಲೆ ಸಿಟ್ಟಿದೆ. ಜನರಿಂದ ಆಯ್ಕೆಯಾಗಿ ಬಂದಿದ್ದೇವೆ ಅಂತ ಸಹಿಸೋದಕ್ಕೆ ಆಗುತ್ತಿಲ್ಲ. ಹಾಗಾಗಿ ಏನೆನೋ ಮಾಡ್ತಾ ಇರ್ತಾರೆ' ಎಂದಿದ್ಧಾರೆ.