ಅಯೋಧ್ಯೆ ತೀರ್ಪು ಯಾರದ್ದೇ ಸೋಲು ಅಥವಾ ಗೆಲುವಲ್ಲ: ಬಿಎಸ್‌ವೈ

Nov 9, 2019, 1:22 PM IST

ಬೆಂಗಳೂರು (ನ.09): ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದರು. ಅಯೋಧ್ಯೆ ತೀರ್ಪು ಯಾರದ್ದೇ ಗೆಲುವು ಅಥವಾ ಸೋಲು ಅಲ್ಲ ಎಂದು ಅವರು ತಿಳಿಸಿದರು.

ಸುಪ್ರೀಂ ಕೋರ್ಟ್‌ನ ಪಂಚ ಪೀಠವು 2.77 ಎಕರೆ ವಿವಾದಿತ ಭೂಮಿಯನ್ನು ರಾಮಜನ್ಮಭೂಮಿ ನ್ಯಾಸಕ್ಕೆ ಸೇರಿದ್ದು ಎಂದು ತೀರ್ಪಿತ್ತಿದೆ. ಸುನ್ನಿ ವಕ್ಫ್ ಬೋರ್ಡ್ ಗೆ  5 ಎಕರೆ ಭೂಮಿಯನ್ನು ನೀಡಬೇಕೆಂದು ಆದೇಶ ಹೊರಡಿಸಿದೆ.