
ಬೆಂಗಳೂರು (ಮೇ.02): ಕೊಡಿಗೇಹಳ್ಳಿಯ ವಿರೂಪಾಕ್ಷಪುರದಲ್ಲಿ ನಾಲ್ವರು ಅಪರಿಚಿತರು ಗಲಾಟೆ ಮಾಡಿ ತನ್ನ ಪತ್ನಿಯನ್ನು ಲೈಂಗಿಕ ಕ್ರಿಯೆಗೆ ಕರೆದರು ಎಂದು ಬಿಹಾರ ಮೂಲದ ವ್ಯಕ್ತಿ ಮಾಡಿದ್ದ ಆರೋಪ ಸುಳ್ಳು ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ. ವಿಶಾಲ್ ತಿವಾರಿ ಎಂಬಾತ ಮಾಧ್ಯಮಗಳ ಎದುರು ಈ ಆರೋಪ ಮಾಡಿದ್ದ. ಮಂಗಳವಾರ ರಾತ್ರಿ ವಿಶಾಲ್ ತಿವಾರಿ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ, ವಿರೂಪಾಕ್ಷಪುರದಲ್ಲಿ ನಾಲ್ವರು ಅಪರಿಚಿತರು ತನ್ನೊಂದಿಗೆ ಗಲಾಟೆ ಮಾಡುತ್ತಿರುವುದಾಗಿ ದೂರು ನೀಡಿದ್ದಾನೆ. ಈ ಸಂಬಂಧ ಮಾಹಿತಿ ಪಡೆದ ಹೊಯ್ಸಳ ಗಸ್ತು ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್ಐ ಮುನಿರಾಜು ಹಾಗೂ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ತೆರಳಿದ್ದಾರೆ.
ಈ ವೇಳೆ ವಿಶಾಲ್ ತಿವಾರಿ ಈ ನಾಲ್ವರು ವಿನಾಕಾರಣ ತನ್ನೊಂದಿಗೆ ಜಗಳ ತೆಗೆದು ಹೊಡೆದರು ಎಂದು ಆರೋಪಿಸಿದ್ದಾನೆ. ಈ ವೇಳೆ ಹೊಯ್ಸಳ ಸಿಬ್ಬಂದಿ ಆ ನಾಲ್ವರನ್ನು ವಿಚಾರಣೆ ಮಾಡಿದಾಗ ಅವರು ಮದ್ಯ ಸೇವಿಸಿರುವುದು ಕಂಡು ಬಂದಿದೆ. ಈ ಸಂಬಂಧ ಪೊಲೀಸ್ ಠಾಣೆಗೆ ಬಂದು ದೂರು ನೀಡುವಂತೆ ವಿಶಾಲ್ ತಿವಾರಿಗೆ ತಿಳಿಸಿದ ಹೊಯ್ಸಳ ಸಿಬ್ಬಂದಿ, ದೂರನ್ನು ಮುಕ್ತಾಯ ಗೊಳಿಸಿ ಸ್ಥಳದಿಂದ ಹೊರಟಿದ್ದಾರೆ. ಈ ಘಟನೆ ಎಎಸ್ಐ ಮುನಿರಾಜು ಧರಿಸಿದ್ದ ಬಾಡಿ ವಾರ್ನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೆಲ ಸಮಯದ ಬಳಿಕ ವಿಶಾಲ್ ತಿವಾರಿ ತನ್ನ ಪತ್ನಿಯನ್ನು ಸ್ಥಳಕ್ಕೆ ಕರೆಸಿಕೊಂಡು ನಾಲ್ವರು ತನಗೆ ಹೊಡೆದ ವಿಚಾರವನ್ನು ತಿಳಿಸಿದ್ದಾನೆ.
ರಾಕ್ಷಸ ಪರಾರಿಯಾದ ಬಗ್ಗೆ ಪ್ರಧಾನಿ ಮೋದಿ ಹೇಳಲಿ: ರಾಹುಲ್ ಗಾಂಧಿ
ಈ ವೇಳೆ ಆ ನಾಲ್ವರು ಅಪರಿಚಿತರು ವಿಶಾಲ್ ತಿವಾರಿ ಮತ್ತು ಆತನ ಪತ್ನಿಯನ್ನು ಬೈದಿದ್ದಾರೆ. ಇದೇ ಸಮಯಕ್ಕೆ ಮಾಧ್ಯಮದವರು ಆ ಸ್ಥಳಕ್ಕೆ ಬಂದಾಗ, ಈ ನಾಲ್ವರು ತನ್ನ ಹೆಂಡತಿ ಜತೆಗೆ ಅಸಭ್ಯವಾಗಿ ವರ್ತಿಸಿದರು. ಲೈಂಗಿಕ ಕ್ರಿಯೆಗೆ ಆಹ್ವಾನಿಸಿದರು ಎಂದು ವಿಶಾಲ್ ತಿವಾರಿ ಆರೋಪಿಸಿದ್ದಾನೆ. ಈ ಸಂಬಂಧ ಕೊಡಿಗೇಹಳ್ಳಿ ಠಾಣೆ ಪೊಲೀಸರು, ವಿಶಾಲ್ ತಿವಾರಿ ಮತ್ತು ಆತನ ಪತ್ನಿಯನ್ನು ಕರೆಸಿ ವಿಚಾರಣೆ ಮಾಡಿದಾಗ, ಆ ನಾಲ್ವರು ಅಪರಿಚಿತರು ಮತ್ತು ನಮ್ಮ ನಡುವೆ ವಾಗ್ವಾದವಾಗಿದೆ. ಅವರು ಲೈಂಗಿಕ ವಿಚಾರ ಮಾತನಾಡಿಲ್ಲ ಎಂದು ದಂಪತಿ ಹೇಳಿದ್ದಾರೆ. ಅಂತೆಯೇ ಘಟನೆ ಸಂಬಂಧ ದೂರು ನೀಡಲು ನಿರಾಕರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ