ಇಡಿ ಕೋಟೆಯಿಂದ ಬಚಾವಾದ ಕನಕಪುರ ಬಂಡೆಗೆ ಸಿಬಿಐ ಕಂಟಕವಾಗುತ್ತಾ?

Jul 25, 2020, 7:09 PM IST

ಬೆಂಗಳೂರು (ಜು. 25): ಕೆಪಿಸಿಸಿ ಸಾರಥಿ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್‌ಗೆ ಸಂಕಷ್ಟ ಎದುರಾಗಿದೆ. ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಜೈಲು ಸೇರಿದ್ದ ಡಿಕೆ ಸಾಹೇಬರಿಗೆ ಸಿಬಿಐ ತನಿಖೆಯ ಉರುಳು ಸುತ್ತಿಕೊಳ್ಳಲಿದೆ. ಕಳೆದ ವರ್ಷ ಇಡಿ ಚಕ್ರವ್ಯೂಹದಲ್ಲಿ ಸಿಲುಕಿದ್ದ ಡಿಕೆಶಿ ಅಕ್ಷರಶಃ ಹೈರಾಣಾಗಿದ್ದರು. ಇಡಿ ವಿಚಾರಣೆ ಅವರನ್ನು ಹೈರಾಣಾಗಿಸಿತ್ತು. ಈಗ ಕೆಪಿಸಿಸಿ ಅಧ್ಯಕ್ಷರಾದ ಕೆಲವೇ ದಿನಗಳಲ್ಲಿ ಸಿಬಿಐ ತನಿಖೆ ಶುರುವಾಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!