Shivaraj Kumar: ಹ್ಯಾಟ್ರಿಕ್ ಹೀರೋ ಜೊತೆ ಹೇಮಂತ್ ರಾವ್ ಸಿನಿಮಾ..! ಸಪ್ತ ಡೈರೆಕ್ಟರ್‌ಗೆ ಜೈ ಎಂದ ಕರುನಾಡ ಚಕ್ರವರ್ತಿ..!

Feb 5, 2024, 11:10 AM IST

ಈ ಭಾರಿ ಶಿವಣ್ಣನಿಗೆ ಆಕ್ಷನ್ ಕಟ್ ಹೇಳೋಕೆ ಡೈರೆಕ್ಟರ್ ಕ್ಯಾಪ್ ತೊಟ್ಟಿರೋದು ಸಪ್ತ ಸಾಗರದಾಚೆ ಎಲ್ಲೋ ಡೈರೆಕ್ಟರ್ ಹೇಮಂತ್ ರಾವ್(Hemant Rao). ನಿರ್ದೇಶಕ ಹೇಮಂತ್ ರಾವ್ ಪ್ರಯೋಗಾತ್ಮಕ ಸಿನಿಮಾಗಳನ್ನು ಪ್ರೇಕ್ಷಕರ ಎದುರು ತಂದು ನಿಲ್ಲಿಸುವ ಕಲೆಗಾರ. ಮನು ಸುರಭಿ ಹಾಗೂ ಪ್ರಿಯಾಳ ಪ್ರೇಮಕಥೆ ಹೇಳಿ ಗೆದಿರೋ ಸಪ್ತ ಸಾಗರದಾಚೆ ಎಲ್ಲೋ(Sapta Sagaradaache Ello) ಸಾರಥಿ ಹೇಮಂತ್ ಈಗ ಹ್ಯಾಟ್ರಿಕ್ ಹೀರೋ ಜೊತೆ ಕೈ ಜೋಡಿಸಿದ್ದಾರೆ.  'ಗೋಧಿ ಬಣ್ಣ ಸಾಧಾರಣ ಮೈಕಟ್ಟು','ಕವಲುದಾರಿ'ಯಂತಹ ಕಂಟೆಂಟ್ ಸಿನಿಮಾಗಳನ್ನ ಕೊಟ್ಟು ಗೆದ್ದಿರೋ ಹೇಮಂತ್ ಈಗ ಶಿವಣ್ಣನ ಜೊತೆ ಸೇರಿ ಮತ್ತೊಂದು ವಿಭಿನ್ನ ಪ್ರಯೋಗಕ್ಕೆ ಬಂದಿದ್ದಾರೆ. ಆ ಸಿನಿಮಾ ಹೇಗಿರುತ್ತೆ ಅನ್ನೋದಕ್ಕೆ ಚಿಕ್ಕಕೊಂದು ಝಲಕ್ಅನ್ನ ರಿವಿಲ್ ಮಾಡಿದ್ದಾರೆ. ಶಿವರಾಜ್ ಕುಮಾರ್(Shivaraj kumar) ಸಧ್ಯ ಕರಟಕ ದಮನಕ ಸಿನಿಮಾ ರಿಲೀಸ್ಗೆ ರೆಡಿಯಾಗಿದ್ದಾರೆ. ಈ ಸಿನಿಮಾ ಬಳಿಕ ಬೈರತಿ ರಣಗಲ್ ಬರುತ್ತೆ. ಈ ಸಿನಿಮಾಗಳ ಜೊತೆ ಈಗ ಶಿವಣ್ಣನ ಅಪ್ಪಟ ಅಭಿಮಾನಿಯಾಗಿರುವ ನಿರ್ಮಾಪಕ ವೈಶಾಕ್ ತಮ್ಮ ಸಿನಿಮಾ ಜರ್ನಿಯನ್ನು ಶಿವಣ್ಣ ಅವರ ಜೊತೆ ಆರಂಭ ಮಾಡುತ್ತಿರುವ ಖುಷಿಯಲ್ಲಿದ್ದಾರೆ. ಅದಕ್ಕೆ ಹೇಮಂತ್ ರಾವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆದ್ರೆ ಸಧ್ಯಕ್ಕೆ ಸಿನಿಮಾ ಟೈಟಲ್. ಕಲಾವಿಧರ ತಂಡದ ಬಗ್ಗೆ ಯಾವ್ದೇ ವಿಚಾರ ವಿರೀಲ್ ಆಗಿಲ್ಲ. ಭಟ್ ಶಿವಣ್ಣ ಹೇಮಂತ್ ಕಾಂಬಿನೇಷನ್ ಮೇಲೆ ಈಗ ದೊಡ್ಡ ನಿರೀಕ್ಷೆಯಂತು ಹುಟ್ಟಿಕೊಂಡಿದೆ.  

ಇದನ್ನೂ ವೀಕ್ಷಿಸಿ:  ಜಿಮ್‌ನಲ್ಲಿ ನಟ ಚಿರಂಜೀವಿ ಫುಲ್ ವರ್ಕೌಟ್..! ಮತ್ತೆ ಫಿಟ್ AND ಫೈನ್ ಆದ ಮೆಗಾ ಸ್ಟಾರ್..!