Nikhil Kumaraswamy: ಕರ್ನಾಟಕ ಬಂದ್‌ಗೆ ರೈಡರ್ ಹೀರೋ ಸಪೋರ್ಟ್

Dec 23, 2021, 12:39 PM IST

ಜಾಗ್ವಾರ್ ನಟ ನಿಖಿಲ್ ಕುಮಾರಸ್ವಾಮಿ(Nikhil Kumar) ಕರ್ನಾಟಕ ಬಂದ್‌ಗೆ(Karnataka Bund) ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಹಾಗೆಯೇ ನಟ ಎಂಇಎಸ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ನಟ ಏನು ಹೇಳಿದ್ದಾರೆ ? ನಿಖಿಲ್ ಮಾತುಗಳು ಇಲ್ಲಿವೆ.

ಫುಟ್ಬಾಲ್ ಪ್ಲೇಯರ್ ಆಗಿ ನಿಖಿಲ್ ಅಬ್ಬರ

ಇನ್ನು ಜಾಗ್ವಾರ್ ಸ್ಟಾರ್ ನಿಖಿಲ್ ಕುಮಾರ್ ಹೀರೋ ಆಗಿ ನಟಿಸುತ್ತಿರೋ ಮೂರನೇ ಸಿನಿಮಾ ರೈಡರ್(Rider).. ಸೀತಾರಾಮ ಕಲ್ಯಾಣದಲ್ಲಿ ಒಂದೊಳ್ಳೆ ಫ್ಯಾಮಿಲಿ ಲವ್ ಸ್ಟೋರಿಯನ್ನ ಹೇಳಿದ್ದ ನಿಖಿಲ್ ರೈಡರ್ ಮೂವಿಯಲ್ಲಿ ಒಬ್ಬ ಸ್ಪೋರ್ಟ್ಸ್ ಮ್ಯಾನ್ ಆಗಿ ಲವ್ ಸ್ಟೋರಿಯನ್ನ ಕಟ್ಟಿಕೊಡುತ್ತಿದ್ದಾರೆ. ವಿಜಯ್ ಕುಮಾರ್ ಕೊಂಡ ಡೈರೆಕ್ಷನ್ ನಲ್ಲಿ ಮೂಡಿ ಬಂದಿರೋ ರೈಡರ್ನಲ್ಲಿ ಕಾಶ್ಮೀರಿ ಪರ್ದೇಸಿ ನಟಿಸಿದ್ದಾರೆ. ಡಿಸೆಂಬರ್ 24ರಂದು ತೆರೆ ಮೇಲೆ ಬರೋ ರೈಡರ್ ಸಿನಿಮಾ ರಾಜ್ಯದ 250 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಒಟ್ನಲ್ಲಿ ಈ ವಾರ ಡಾಲಿಯ ಬಡವ ರಾಸ್ಕಲ್ ಹಾಗು ನಿಖಿಲ್ ನಟಿಸಿರೋ ರೈಡರ್ ಸಿನಿಮಾಗಳ ಅಬ್ಬರ ಜೋರಾಗಿರುತ್ತೆ ಅನ್ನೋದಂತು ಕನ್ಫರ್ಮ್.