ಧಾರವಾಡ: ಕಿಡ್ನ್ಯಾಪ್‌ ಕೇಸ್‌ನಲ್ಲಿ ನಾಲ್ವರ ಬಂಧನ, ಮಕ್ಕಳ ಅಪಹರಣದಲ್ಲಿ ತಾಯಂದಿರೇ ಶಾಮೀಲು!

Published : Nov 20, 2024, 05:13 PM IST
ಧಾರವಾಡ: ಕಿಡ್ನ್ಯಾಪ್‌ ಕೇಸ್‌ನಲ್ಲಿ ನಾಲ್ವರ ಬಂಧನ, ಮಕ್ಕಳ ಅಪಹರಣದಲ್ಲಿ ತಾಯಂದಿರೇ ಶಾಮೀಲು!

ಸಾರಾಂಶ

ಈ ಕೇಸ್‌ನಲ್ಲಿ ವಿಶೇಷ ಎಂದರೆ ಮಕ್ಕಳ ಅಪಹರಣದಲ್ಲಿ ಅವರ ತಾಯಂದಿರೇ ಶಾಮೀಲಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಗಳು ಕಳೆದ ದಿ.5 ರಂದು‌ ನಗರದಿಂದ ಆರು ಮಕ್ಕಳನ್ನು ಅಪಹರಿಸಿದ್ದರು. ಅದೇ ದಿನ‌ ಮಕ್ಕಳ‌ ನಾಪತ್ತೆ ಕುರಿತು ವಿದ್ಯಾಗಿರಿ ಠಾಣೆಯಲ್ಲಿ‌ ದೂರು ದಾಖಲಾಗಿತ್ತು.  

ಧಾರವಾಡ(ನ.20):  ನಗರದಿಂದ ಆರು ಮಕ್ಕಳನ್ನು ಅಪಹರಿಸಿದ ನಾಲ್ವರನ್ನು ನಗರದ ವಿದ್ಯಾಗಿರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಧಾರವಾಡದ ರೇಶ್ಮಾ ಸಾಂಬ್ರಾಣಿ, ಪ್ರಿಯಾಂಕ ಸಾಂಬ್ರಾಣಿ, ಭೂಸಪ್ಪ ಚೌಕ ನಿವಾಸಿ ಸುನೀಲ‌ ಕರಿಗಾರ ಮತ್ತು ಶಿಕಾರಿಪುರ ಮೂಲದ ಮುತ್ತುರಾಜ ಬಿ. ಬಂಧಿತ ಆರೋಪಿಗಳಾಗಿದ್ದಾರೆ. 

ಈ ಕೇಸ್‌ನಲ್ಲಿ ವಿಶೇಷ ಎಂದರೆ ಮಕ್ಕಳ ಅಪಹರಣದಲ್ಲಿ ಅವರ ತಾಯಂದಿರೇ ಶಾಮೀಲಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಗಳು ಕಳೆದ ದಿ.5 ರಂದು‌ ನಗರದಿಂದ ಆರು ಮಕ್ಕಳನ್ನು ಅಪಹರಿಸಿದ್ದರು. ಅದೇ ದಿನ‌ ಮಕ್ಕಳ‌ ನಾಪತ್ತೆ ಕುರಿತು ವಿದ್ಯಾಗಿರಿ ಠಾಣೆಯಲ್ಲಿ‌ ದೂರು ದಾಖಲಾಗಿತ್ತು.

50ರ ಅಂಕಲ್‌ನ ಪ್ರೀತಿ ಫಜೀತಿ, ಡೇಟ್‌ಗೆ ಕರೆದೊಯ್ದು ಕಿಡ್ನಾಪ್ ಮಾಡಿ 3 ಲಕ್ಷ ರೂಗೆ ಬೇಡಿಕೆ ಇಟ್ಟ ಗೆಳತಿ!

ಕೂಡಲೇ ಕಾರ್ಯಪ್ರವೃತ್ತರಾದ ವಿದ್ಯಾಗಿರಿ ಠಾಣೆಯ ಸಿಪಿಐ ಸಂಗಮೇಶ ದಿಡಿಗಿನಾಳ‌ ನೇತೃತ್ವದ ಸಿಬ್ಬಂದಿ, ಅಪಹರಿಸಿದ‌ ಮಕ್ಕಳ‌ ಸಮೇತ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಪಹರಣದ ಉದ್ದೇಶ ಮತ್ತು ಇತರ ಆರೋಪಿಗಳ‌ ಕುರಿತು ಪೊಲೀಸರು ತನಿಖೆಯನ್ನ ನಡೆಸುತ್ತಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ