'ವಾಯುಪುತ್ರ'ನ ಬಗ್ಗೆ ಅಜಯ್ ರಾವ್ ಮಾತುಗಳಿವು

Jun 8, 2020, 6:17 PM IST

ಬೆಂಗಳೂರು (ಜೂ. 08): ಕನ್ನಡ ಚಿತ್ರರಂಗದ 'ವಾಯುಪುತ್ರ', 'ಗಂಡೆದೆ; ವೀರ ಚಿರು ಸರ್ಜಾ ಇನ್ನು ನೆನಪು ಮಾತ್ರ. ಅವರ ಆಟ, ತುಂಟಾಟ, ನಗು ಕಣ್ಮರೆಯಾಗಿದೆ. ಯಾರೂ ಅರಗಿಸಿಕೊಳ್ಳಲಾಗದ ಸತ್ಯ ಇದು. ಚಿರು ಜೊತೆಗಿನ ಒಡನಾಟವನ್ನು, ಸ್ನೇಹವನ್ನು ನಟ ಅಜಯ್ ರಾವ್ ಹೀಗೆ ನೆನೆಸಿಕೊಂಡಿದ್ದಾರೆ. 'ಚಿರುನ ಯಾವತ್ತೂ ಬೇಜಾರು ಮುಖದಲ್ಲಿ ನೋಡಿಲ್ಲ. ಅವನು ಎಲ್ಲೇ ಸಿಕ್ಕರೂ ದೊಡ್ಡದಾಗಿ ನಗುತ್ತಿದ್ದ.  ಮೊದಲೆಲ್ಲಾ ಹೆಚ್ಚು ಸಿಗುತ್ತಿದ್ವಿ. ಯಶ್ ಬರ್ತಡೇ ಸಂದರ್ಭದಲ್ಲಿ ಭೇಟಿ ಮಾಡಿದ್ದೇ ಕೊನೆ. ಆಮೇಲೆ ಭೇಟಿಯಾಗಿಲ್ಲ. ನಿಜಕ್ಕೂ ಆಘಾತಕಾರಿ ವಿಚಾರ' ಎಂದು ಅಜಯ್ ರಾವ್ ಹೇಳಿದರು. 

ಚಿರು ಬಗ್ಗೆ ನಟ ಅಭಿಷೇಕ್ ಅಂಬರೀಶ್ ಮಾತು