ಒಂದೊಂದು ರೋಡ್‌ ಶೋ ಜನರ ಮೇಲೆ ಬಹಳ ಪರಿಣಾಮ ಬೀರುತ್ತೆ: ಸುರೇಶ್‌ ಕುಮಾರ್‌

May 6, 2023, 12:58 PM IST

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸುತ್ತಿದ್ದು, ಈ ಬಗ್ಗೆ ಮಾಜಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಮಾತನಾಡಿದ್ದಾರೆ. ಬೇರೆ ಬೇರೆ ಊರುಗಳಲ್ಲಿ ಮೋದಿ ರೋಡ್‌ ಶೋ ನೋಡಿದ್ವಿ. ಮಂಡ್ಯದಿಂದ ಬೆಳಗಾವಿಯವರೆಗೆ ಮೋದಿ ಮಾಡಿರುವ ರೋಡ್‌ ಶೋ ಯಾವ ರೀತಿ ಪರಿಣಾಮ ಬೀರಿದೆ ಎಂದು ನಾವು ನೋಡಿದ್ದೇವೆ. ಈಗ ನಮ್ಮ ಕ್ಷೇತ್ರದ ಜನರ ಮನೆ ಬಾಗಿಲಿಗೆ ಪ್ರಧಾನಿ ಮೋದಿ ಬರುತ್ತಿದ್ದಾರೆ. ಇದು ನಮ್ಮ ಉತ್ಸಾಹವನ್ನು ಹೆಚ್ಚಿಸಿದ್ದು, ಆ ಕ್ಷಣಕ್ಕೊಸ್ಕರ ಎದುರು ನೋಡುತ್ತಿದ್ದೇವೆ. ನನ್ನ ಕ್ಷೇತ್ರದಿಂದ ನವರಂಗ್‌ವರೆಗೆ ಕನಿಷ್ಟ ಒಂದರಿಂದ ಒಂದೂವರೆ ಲಕ್ಷ ಜನ ಸೇರಿ ಮೋದಿಯವರನ್ನು ಸ್ವಾಗತಿಸುತ್ತಾರೆ ಎಂದು ಸುರೇಶ್‌ ಕುಮಾರ್‌ ಹೇಳಿದರು.

ಇದನ್ನೂ ವೀಕ್ಷಿಸಿ: ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ ಆರಂಭ: ಕೇಸರಿ ಹುರಿಯಾಳುಗಳ ಪರ ಪ್ರಧಾನಿ ಮತಶಿಕಾರಿ