‘ರಾಜೀನಾಮೆ ಪಡೆಯಲು ನಿತ್ಯ 100 ಕಿ.ಮೀ ಪಯಣಿಸಿ ಸಾಕಾಗಿದೆ’!

Jul 4, 2019, 8:32 PM IST

ಬೆಂಗಳೂರು(ಜು.07): ಶಾಸಕರ ರಾಜೀನಾಮೆ ವದಂತಿಗೆ ಸ್ಪೀಕರ್ ರಮೇಶ್ ಕುಮಾರ್ ತಮಾಷೆ ಮಾಡಿದ್ದಾರೆ. ಯಾರಾದರೂ ಬಂದು ರಾಜೀನಾಮೆ ಕೊಡುತ್ತಾರೆ ಎಂದು ನಾನು ದಿನವೂ 100 ಕಿ.ಮೀ ಪ್ರಯಾಣ ಮಾಡಿ ಬಂದು ಕಾಯುತ್ತಿದ್ದೇನೆ. ಆದರೆ ಇದುವರೆಗೂ ಯಾರೂ ಬಂದು ರಾಜೀನಾಮೆ ಕೊಡಲು ಬಂದಿಲ್ಲ ಎಂದರು. ಶಾಸಕರ ರಾಜೀನಾಮೆ ಕುರಿತು ತಮಗಿಂತ ಮಾಧ್ಯಮಗಳಿಗೇ ಹೆಚ್ಚಿನ ಮಾಹಿತಿ ಇದ್ದು, ದಯಮಾಡಿ ರಾಜೀನಾಮೆ ಕೊಡಬೇಕೆಂದಿರುವ ಶಾಸಕರನ್ನು ತಮ್ಮ ಬಳಿ ಕರೆತರುವಂತೆ ಸ್ಪೀಕರ್ ತಮಾಷೆಯಾಗಿ ಮನವಿ ಮಾಡಿದರು. 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..