ಶಿರಾ ಬೈ ಎಲೆಕ್ಷನ್: ಹರಿದುಬಂದ ಜನಸಾಗರ, ಡಿಸಿಎಂಗೆ ಹೆಚ್ಚಿಸಿದ ವಿಶ್ವಾಸ

Oct 31, 2020, 6:46 PM IST

ತುಮಕೂರು, (ಅ.31): ಕಲ್ಪತರು ನಾಡಿನಲ್ಲಿ ಉಪಕದನ ಕಣ ದಿನೇ ದಿನೇ ರಂಗೇರಿದೆ. ಕಾಂಗ್ರೆಸ್- ಜೆಡಿಎಸ್ ಭದ್ರಕೋಟೆಗೆ ಈಗ ಬಿಜೆಪಿ ದೃಷ್ಟಿ ಹರಿಸಿದ್ದು, ಮೂರು ಪಕ್ಷಗಳ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಜಾತಿ ಲೆಕ್ಕಾಚಾರದ ನಡುವೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಉಂಟಾಗಿದೆ.

ನಾಮಪತ್ರ ವಾಪಸ್ ಪಡೆದು ಚುನಾವಣಾ ಅಖಾಡದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ

ರಾಜ್ಯದ ಗಮನ ಸೆಳೆದಿರುವ ಕಲ್ಪತರು ನಾಡಿನ ಕೋಟೆ ಕೊತ್ತಲಗಳ ಬೀಡಿನಲ್ಲಿ ಶಿರಾ ರಾಜ ಯಾರಾಗುತ್ತಾರೆ ಎನ್ನುವ ಕುತೂಹಲ ದಿನೇ ದಿನೇ ಮೂಡುತ್ತಿದೆ. ಇನ್ನು ಈ ಬಗ್ಗೆ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು ಅಭಿಪ್ರಾಯ ತಿಳಿಸಿದ್ದಾರೆ.