ಸಿಎಂ ಪ್ರವಾಸದಿಂದ ದೂರ ಉಳಿದ ಜಾರಕಿಹೊಳಿ ಟೀಮ್..!

Jan 29, 2020, 9:11 PM IST

ಬೆಂಗಳೂರು, [ಜ.29]: ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಬೆಳಗಾವಿ ಪ್ರವಾಸದಿಂದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಟೀಮ್‌ ಅಂತರ ಕಾಯ್ದುಕೊಳ್ಳುವ ಮೂಲಕ ಸಂಪುಟ ವಿಸ್ತರಣೆ ವಿಳಂಬಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದೆ.

ಸಂಪುಟ ವಿಸ್ತರಣೆ: ಸಂಭಾವ್ಯ ಪಟ್ಟಿ ರೆಡಿ, ಬಿಎಸ್‌ವೈ ಲೀಸ್ಟ್‌ನಲ್ಲಿ ಯಾರೆಗೆಲ್ಲ ಸ್ಥಾನ.?

ಸಿಎಂ ಅವರು ಇಂದು [ಬುಧವಾರ] ಬೆಳಗಾವಿ ಜಿಲ್ಲೆಯಲ್ಲಿಅಧಿಕೃತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಾಕಷ್ಟು ಮುಂಚೆಯೇ ಈ ಪ್ರವಾಸ ನಿಗದಿಯಾಗಿತ್ತು. ಈ ನಡುವೆಯೂ ಜಿಲ್ಲೆಯ ಪ್ರಭಾವಿ ರಾಜಕಾರಣಿ ಹಾಗೂ ಅರ್ಹ ಶಾಸಕ ರಮೇಶ್‌ ಜಾರಕಿಹೊಳಿ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸಿಎಂಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.