ಸಿಎಂ ಆಪ್ತ ಸಂತೋಷ್ ಆತ್ಮಹತ್ಯೆಗೆ ಯತ್ನ: ಪ್ರಕರಣಕ್ಕೆ ಡಿಕೆಶಿ 'ರಹಸ್ಯ ವೀಡಿಯೋ' ಟ್ವಿಸ್ಟ್!

Nov 28, 2020, 1:21 PM IST

ಬೆಂಗಳೂರು (ನ. 28): ಮುಖ್ಯಮಂತ್ರಿ ಬಿಎಸ್‌ವೈ ಆಪ್ತ ಸಂತೋಷ್‌ ಆತ್ಮಹತ್ಯೆಗೆ ಯತ್ನ ಪ್ರಕರಣಕ್ಕೆ ಡಿಕೆಶಿ ಟ್ವಿಸ್ಟ್ ಕೊಟ್ಟಿದ್ದಾರೆ. 

ಸಿಎಂ ಪಿಎ ಸಂತೋಷ್ ಅತ್ಮಹತ್ಯೆ ಯತ್ನಕ್ಕೆ ಕಾರಣ ಇದಾಗಿರಬಹುದೆಂಬ ಶಂಕೆ?

"ಈ ರೀತಿ ಅಗಬಹುದು ಎಂದು ನನಗೆ ಮೊದಲೇ ಗೊತ್ತಿತ್ತು. ಸಂತೋಷ್ ವಿರುದ್ಧದ ವಿಡಿಯೋವೊಂದನ್ನು ನಿನ್ನೆ ಹೈಕಮಾಂಡ್‌ಗೆ ಕೊಡಲಾಗಿದೆ. ಅದನ್ನು ಹೈಕಮಾಂಡ್ ನೋಡಿದ್ದಾರೆ. ಇದರಲ್ಲಿ ಗೌಪ್ಯ ವಿಚಾರ ಅಡಗಿದೆ. ಸೂಕ್ತ ತನಿಖೆಯಾಗಬೇಕು' ಎಂದು ಡಿಕೆಶಿ ಬಾಂಬ್ ಹಾಕಿದ್ದಾರೆ.