ಮೋದಿ ಅಲೆನೂ ಇಲ್ಲ, ಏನೂ ಇಲ್ರಿ, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ'

Nov 9, 2020, 5:59 PM IST

ಬೆಂಗಳೂರು (ನ. 09): ನಾಳೆ ಆರ್‌ಆರ್‌ ನಗರ ಹಾಗೂ ಶಿರಾದಲ್ಲಿ ಮತ ಎಣಿಕೆ ನಡೆಯಲಿದೆ. ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. 'ಮೋದಿ ಅಲೆ ಎಲ್ಲಿದೆ, ಅಲೆನೂ ಇಲ್ಲ, ಪಲೆನೂ ಇಲ್ಲ.  ಎಲ್ಲಾ ಕಡೆ ಕಾಂಗ್ರೆಸ್ ಅಲೆ ಕಾಣಿಸುತ್ತಿದೆ. ಎರಡೂ ಕ್ಷೇತ್ರಗಳಲ್ಲಿ ನಾವು ಗೆಲ್ಲುವ ವಿಶ್ವಾಸವಿದೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ಅಶೋಕ್ ಸಾವಿನ ಬಗ್ಗೆ ಅನುಮಾನ, ನ್ಯಾಯಾಂಗ ತನಿಖೆಗೆ ಡಿಕೆಶಿ ಆಗ್ರಹ

ಇನ್ನಿ ಬಿಹಾರ ಚುನಾವಣೆ ಬಗ್ಗೆ ಮಾತನಾಡಿ, ಬಿಹಾರದಲ್ಲಿ ಘಠಬಂಧನ್ ಗೆಲ್ಲಲಿದೆ ಎನ್ನಲಾಗುತ್ತಿದೆ.  ಮೋದಿಯವರ ಪರ ವಿಶ್ವಾಸ ಕಡಿಮೆಯಾಗುತ್ತಿದೆ. 15 ವರ್ಷ ಸಿಎಂ ಆಗಿದ್ರೂ ನಿತೀಶ್ ಕುಮಾರ್ ಏನೂ ಕೆಲಸ ಮಾಡಿಲ್ಲ. ಆಡಳಿತ ವಿರೋಧಿ ಅಲೆಯಿದೆ.  ನುಡಿದಂತೆ ನಡೆದುಕೊಂಡಿಲ್ಲ. ಹಾಗಾಗಿ ಬಿಹಾರ ಜನ ಬದಲಾವಣೆ ಬಯಸಿದ್ದಾರೆ.