Sep 27, 2022, 6:24 PM IST
ಬೆಂಗಳೂರು (ಸೆ.27): ರಾಜ್ಯದಲ್ಲಿ ಪಿಎಫ್ಐ, ಎಸ್ಡಿಪಿಐ ಸಂಘಟನೆ ಬೆಳೆಯಲು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾರಣ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ಗೆ ತಿರುಗೇಟು ನೀಡಿದ್ದಾರೆ. ನಳೀನ್ ಕುಮಾರ್ ಕಟೀಲ್ ಒಬ್ಬ ವಿದೂಷಕ, ಆತನಿಗೆ ಪ್ರಬುದ್ಧತೆ ಇಲ್ಲ ಎಂದು ಕಿಡಿಕಾರಿದ್ದಾರೆ.
ನಾನು ಅಧಿಕಾರದಲ್ಲಿದ್ದ ಅವಧಿಯಲ್ಲಿ ಬಿಜೆಪಿ ವಿರೋಧ ಪಕ್ಷವಾಗಿತ್ತು. ಹಾಗೇನಾದರೂ ನಾನು ಪಿಎಫ್ಐ, ಎಸ್ಡಿಪಿಐ ಬೆಳೆಯಲು ಸಹಾಯ ಮಾಡಿದ್ದರೆ, ಬಿಜೆಪಿ ಏಕೆ ವಿರೋಧಿಸಲಿಲ್ಲ. ಅವರ ಬಾಯಲ್ಲೇನು ಕಡುಬು ಸಿಕ್ಕು ಹಾಕಿಕೊಂಡಿತ್ತಾ ಎಂದು ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಕಾಲದ್ದು ಸೇರಿ ಕಳೆದ 15 ವರ್ಷದ ತನಿಖೆ ನಡೆಯಲಿ. ತನಿಖೆ ನಡೆಸೋಕೆ ನಿಮಗೇಕೆ ಭಯ ಎಂದು ಪ್ರಶ್ನೆ ಮಾಡಿದ್ದಾರೆ.
News Hour: ಸಿದ್ದು ಬಣದ ವಿರುದ್ಧ ಮತ್ತೆ ಸಿಡಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ!
ತನಿಖೆ ಮಾಡ್ಸೋದು ಬಿಟ್ಟು, ಜಾತಿ ವಿಚಾರ ಮಾತಾಡ್ತಾರೆ. ಜಾತಿಗೂ ಭ್ರಷ್ಟಾಚಾರಕ್ಕೂ ಏನು ಸಂಬಂಧ. ಸಿಎಂ ಹಾಗೂ ಸರ್ಕಾರದ ಮೇಲೆ ಆರೋಪ ಮಾಡ್ತಿದ್ದೀವಿ, ಜಾತಿ ಮೇಲೆ ಆರೋಪ ಮಾಡ್ತಿಲ್ಲ. ಇವರಿಗೆ ಈಗ ಜನರೇ ಬುದ್ಧಿ ಕಲಿಸ್ತಾರೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.