'ವಿಳಂಬ ಆಗ್ಲಿ, ಸೋತವರಿಗೂ ಮಂತ್ರಿಗಿರಿ ಸಿಗ್ಲೇಬೇಕು'

Jan 29, 2020, 7:03 PM IST

ಬೆಂಗಳೂರು, (ಜ.29): ಉಪಚುನಾವಣೆ ಫಲಿತಾಂಶ ಹೊರಬಿದ್ದು ಒಂದುವರೆ ತಿಂಗಳು ಕಳೆದುಹೋಯ್ತು. ಆದ್ರೆ, ನೂತನ ಶಾಸಕರಿಗೆ ಇದುವರೆಗೂ ಮಂತ್ರಿ ಭಾಗ್ಯವಿಲ್ಲ.

ಸಂಪುಟ ವಿಸ್ತರಣೆ: ಸಂಭಾವ್ಯ ಪಟ್ಟಿ ರೆಡಿ, ಬಿಎಸ್‌ವೈ ಲೀಸ್ಟ್‌ನಲ್ಲಿ ಯಾರೆಗೆಲ್ಲ ಸ್ಥಾನ.?

ಒಂದು ಕಡೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಬಂದು ಉಪಚುನಾವಣೆಯಲ್ಲಿ ಗೆದ್ದ ಎಲ್ಲಾ ಶಾಸಕರುಗಳಿಗೆ ಸಚಿವ ಸ್ಥಾನ ಕೊಡಬೇಕೋ ಬೇಡವೋ ಎನ್ನುವ ಚರ್ಚೆಗಳು ನಡೆದಿವೆ. ಮತ್ತೊಂದೆಡೆ ಗೆದ್ದ ಹಾಗೂ ಸೋತ ಎಲ್ಲರಿಗೂ ಮಂತ್ರಿಗಿರಿ ಸಿಗಲೇಬೇಕೆಂದು ಪಟ್ಟು ಹಿಡಿದಿದ್ದಾರೆ.