ನಾನು ಸಿದ್ದರಾಮಯ್ಯರಷ್ಟು ಬುದ್ಧಿವಂತನಲ್ಲ, ಆದರೆ...: ಕಾಂಗ್ರೆಸ್‌ ವಿರುದ್ಧ ಸುಧಾಕರ್ 'ಜಿಲೆಬಿ' ಅಸ್ತ್ರ

Sep 26, 2022, 4:56 PM IST

ಬೆಂಗಳೂರು (ಸೆ. 26): ರಾಜ್ಯ ಕಾಂಗ್ರೆಸ್‌ನ ‘ಪೇ-ಸಿಎಂ’ (PayCM) ಅಭಿಯಾನದ ವಿರುದ್ಧ ಕಿಡಿಕಾರಿರುವ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಕಾಂಗ್ರೆಸ್‌ ಒಕ್ಕಲಿಗ (ಗೌಡ), ಲಿಂಗಾಯತ ಹಾಗೂ ಬ್ರಾಹ್ಮಣರ ವಿರುದ್ಧ ನಿಂತಿದೆ ಎಂದು ಆರೋಪಿಸುವ ಮೂಲಕ ಮತ್ತೆ  ‘ಜಿಲೆಬಿ’ ಅಸ್ತ್ರ ಪ್ರಯೋಗಿಸಿದ್ದಾರೆ.  ಮಾಜಿ ಪ್ರಧಾನಿ ದೇವಗೌಡರ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಅವರು ನಾನು ಸಿದ್ದರಾಮಯ್ಯರಷ್ಟು ಬುದ್ಧಿವಂತನಲ್ಲ, ಆದರೆ ಇತಿಹಾಸವನ್ನು ನಾನೂ ಅಧ್ಯಯನ ಮಾಡಿದ್ದೇನೆ,  ಎಂದರು.  "ಕಾಶ್ಮೀರದಲ್ಲಿ ಚುನಾವಣೆ ಮಾಡಿದವರು ದೇವೆಗೌಡರು, ಈಶಾನ್ಯ ರಾಜ್ಯಗಳಿಗೆ 6 ಸಾವಿರ ಕೋಟಿ ಅನುದಾನ ಕೊಟ್ಟಿದ್ದರು, ಆದರೆ ಮಾಜಿ ಪ್ರಧಾನಿಗಳನ್ನು ಕೆಳಗಿಳಿಸಿದ್ದು ಕಾಂಗ್ರೆಸ್‌" ಎಂದು ಟೀಕಿಸಿದರು. ಈ ಕುರಿತಿ ರಿಪೋರ್ಟ್‌ ಇಲ್ಲಿದೆ 

Karnataka Politics: ಕಾಂಗ್ರೆಸ್‌ನ Paycm ಅಸ್ತ್ರಕ್ಕೆ ಕೇಸರಿ ಕೌಂಟರ್!